ತ್ಯಾಜ್ಯ ಸಂಗ್ರಹ ಕೇಂದ್ರವಾಗಿ ಮಾರ್ಪಾಡುಗೊಂಡ ಕುದುಕೋಟಿ ರಸ್ತೆ: ದುರ್ವಾಸನೆಯಿಂದ ಸಂಚಾರ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಒಳರಸ್ತೆಗಳು ತ್ಯಾಜ್ಯ ಸಂಗ್ರಹ ಕೇಂದ್ರವಾಗಿ ಮಾರ್ಪಾಡುಗೊಳ್ಳುತ್ತಿದ್ದು, ತೆರವುಗೊಳಿಸಲು ಪಂಚಾಯತ್ ಅಧಿಕಾರಿಗಳು ಮುಂದಾಗದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮಣ್ಣಂಗುಳಿ ಮೈದಾನ ಪರಿಸರ, ನಯಬಜಾರ್-ಪ್ರತಾಪನಗರ ರಸ್ತೆಯ ಕುದುಕೋಟಿ ಸಹಿತ ವಿವಿಧ ಕಡೆಗಳಲ್ಲಿ ತ್ಯಾಜ್ಯಗಳು ತುಂಬಿಕೊAಡಿರುವುದಾಗಿ ಸಾರ್ವ ಜನಿಕರು ಆರೋಪಿಸಿದ್ದಾರೆ. ಕುದು ಕೋಟಿ ರಸ್ತೆ ತನಕ ತ್ಯಾಜ್ಯ ರಾಶಿ ತಲುಪಿದೆ. ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ವಾಹನದ ಮೂಲಕ ವಿವಿಧ ಕಡೆಗಳಿಂದ ರಾತ್ರಿ ಹಾಗೂ ಮುಂ ಜಾನೆ ಹೊತ್ತಲ್ಲಿ ತಂದು ಎಸೆಯುತ್ತಿರು ವುದಾಗಿ ಹೇಳಲಾಗುತ್ತಿದೆ. ಭಾರೀ ಪ್ರಮಾಣದಲ್ಲಿ ತ್ಯಾಜ್ಯ ರಾಶಿಗಳು ಚೆಲ್ಲಾಪಿಲ್ಲಿಯಾಗಿ ರಸ್ತೆ ಪೂರ್ತಿ ಹರಡಿಕೊಂಡಿದೆ. ಈ ದಾರಿಯಾಗಿ ನಡೆದು ಹೋಗುವವರಿಗೆ ದುರ್ವಾ ಸನೆಯಿಂದ ಸಮಸ್ಯೆಯಾಗಿದೆ. ಸಂಬAಧಪಟ್ಟ ಅಧಿಕಾರಿಗಳು ತ್ಯಾಜ್ಯ ತೆರವಿಗೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page