ನಾಲಂದ ಕಾಲೇಜು ಭೂಮಿತ್ರ ಸೇನೆ ಆಶ್ರಯದಲ್ಲಿ ಅಂಗನವಾಡಿ ಪರಿಸರ ಸ್ವಚ್ಛತೆ

ಪೆರ್ಲ: ನಾಲಂದ ಕಾಲೇಜು ಭೂಮಿತ್ರ ಸೇನಾ ಕ್ಲಬ್ ಹಾಗೂ ನಾಲಂದ ಗ್ರಾಮ ವಿಕಾಸ ಯೋಜನೆ ಜಂಟಿ ಆಶ್ರಯದಲ್ಲಿ ಸ್ವಚ್ಛತಾ ಹಿ ಸೇವಾ ಸಪ್ತಾಹದಂಗವಾಗಿ ಕನ್ನಟಿಕಾನ ಹಾಗೂ ಪಡ್ರೆ ಅಂಗನವಾಡಿ ಪರಿಸರವನ್ನು ಶುಚಿಗೊಳಿಸಲಾಯಿತು. ವಾರ್ಡ್ ಪ್ರತಿನಿಧಿ ರಾಮಚಂದ್ರ ಎಂ. ಉದ್ಘಾಟಿಸಿದರು. ಅಂಗನವಾಡಿ ಶಿಕ್ಷಕಿ ಕುಸುಮ, ಲಕ್ಷ್ಮಿತ, ಗ್ರಾಮವಿಕಾಸ ಯೋಜನೆ ಕಾರ್ಯದರ್ಶಿ ವೇಣುಗೋಪಾಲ್, ಶ್ರೀನಿಧಿ ಕೆ, ಭೂಮಿತ್ರ ಸೇನಾ ಕ್ಲಬ್ ಸಂಯೋಜಕ ಮನೋಜ್ ಕುಮಾರ್ ಪಿ., ಗ್ರಾಮ ವಿಕಾಸ ಯೋಜನೆಯ ಸಂಯೋಜಕಿ ಆಶಾಲತಾ, ಅಂಗನವಾಡಿ ಮಕ್ಕಳ ಪೋಷಕರು ಸಹಕರಿಸಿದರು.

RELATED NEWS

You cannot copy contents of this page