ಬಂದರಿನಲ್ಲಿ ಗಾಳ ಹಾಕುತ್ತಿದ್ದಾಗ ನಾಪತ್ತೆಯಾದ ಯುವಕನಿಗಾಗಿ ವ್ಯಾಪಕ ಶೋಧ

ಕಾಸರಗೋಡು: ಕೀಯೂರು ಹಾರ್ಬರ್‌ನಲ್ಲಿ  ಮೀನು ಹಿ ಡಿಯಲು ಗಾಳ ಹಾಕು ತ್ತಿದ್ದ ವೇಳೆ ನಾಪತ್ತೆಯಾದ ಯುವಕನ ಪತ್ತೆಗಾಗಿ ಮೇಲ್ಪರಂಬ ಪೊಲೀಸರು ಶೋಧ ಆರಂಭಿಸಿದ್ದಾರೆ.  ಚೆಮ್ನಾಡ್ ನಿವಾಸಿ ರಿಯಾಸ್ ಎಂಬವರು  ಶನಿವಾರ ಹಾರ್ಬರ್ ಬಳಿಯಿಂದ ನಾಪತ್ತೆಯಾ ಗಿದ್ದಾರೆ. ಮೀನಿಗೆ ಗಾಳ ಹಾಕುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಅವರು ನೀರಿಗೆ ಬಿದ್ದಿರಬಹುದೆಂದು ಸಂಶ ಯಿಸ ಲಾಗುತ್ತಿದೆ.  ಹಾರ್ಬರ್ ಬಳಿ ಅವರ ಸ್ಕೂಟರ್ ಮತ್ತು  ಬ್ಯಾಗ್ ಪತ್ತೆ ಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

You cannot copy contents of this page