ಬಸ್ಸಿಗೆ ಹಾನಿ: ಗಾಜು ಪುಡಿಗೈಯ್ಯಲ್ಪಟ್ಟು ವಿದ್ಯಾರ್ಥಿನಿಗೆ ಗಾಯ

ಕಾಸರಗೋಡು: ಬಂದಡ್ಕ ಆನೆಕಲ್ಲಿನಲ್ಲಿ ಖಾಸಗಿ ಬಸ್‌ಗೆ ವ್ಯಕ್ತಿಯೋರ್ವ ಹಾನಿಗೈದ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಬಂದಡ್ಕದಿಂದ ಕಾಸರಗೋಡಿಗೆ ತೆರಳುತ್ತಿದ್ದ ತತ್ವಮಸಿ ಸ್‌ಗೆ ಬೈಕ್‌ನಲ್ಲಿ ತಲುಪಿದ ವ್ಯಕ್ತಿ ಹಾನಿಯೆಸಗಿದ್ದಾನೆ. ಬಸ್‌ಗೆ ಅಡ್ಡವಾಗಿ ಬೈಕ್ ನಿಲ್ಲಿಸಿದ ಆತ ಹೆಲ್ಮೆಟ್‌ನಿಂದ ಗಾಜಿಗೆ ಹೊಡೆದು  ಪುಡಿಗೈದಿರುವುದಾಗಿ ದೂರಲಾಗಿದೆ. ಉಣ್ಣಿ ಎಂಬ ವ್ಯಕ್ತಿ ಹಾನಿನಡೆಸಿರು ವುದಾಗಿ ಹೇಳಲಾಗುತ್ತಿದೆ.  ಬಸ್ಸಿನ  ಗಾಜು ಪುಡಿಗೈಯ್ಯಲ್ಪಟ್ಟು ಸಿಡಿದ ಪರಿಣಾಮ ಓರ್ವೆ ವಿದ್ಯಾರ್ಥಿನಿಯ ಕಣ್ಣಿಗೆ ಗಾಯವಾಗಿದೆ.  ಬೇಡಗಂ ಪೊಲೀಸರು ಕೇಸು ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. ಆಕ್ರಮಣಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.

You cannot copy contents of this page