೧೦.೧೪ ಗ್ರಾಂ ಎಂಡಿಎಂಎ ವಶ: ಓರ್ವ ಸೆರೆ

ಕುಂಬಳೆ: ಬಂಬ್ರಾಣದ ಬಳಿ ಕಾಸರಗೋಡು ಎಕ್ಸೈಸ್ ಎನ್‌ಪೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್ಸ್‌ಪೆಕ್ಟರ್ ಶಂಕರ್ ಜೆ.ಎ.ರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕಾರೊಂದರಲ್ಲಿ ಸಾಗಿಸುತ್ತಿದ್ದ ೧೦.೧೪ ಗ್ರಾಂ ಎಂಡಿಎಂಎ ಮಾದಕ ದ್ರವ್ಯ ಪತ್ತೆಹಚ್ಚಿ ವಶಪಡಿಸಿದೆ.

ಈ ಸಂಬಂಧ ಬಾಯಿಕಟ್ಟೆಯ ಬತ್ತೇರಿ ನಿವಾಸಿ ಮೊಹಮ್ಮದ್ ಮುಸ್ತಫಾ ಯು.ಎಂ. (೩೩) ಎಂಬಾತನನ್ನು ಬಂಧಿಸಿ, ಕಾರನ್ನು ವಶಪಡಿಸಲಾಗಿದೆ. ಆತನ ವಿರುದ್ಧ ಎನ್‌ಡಿಪಿಎಸ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಬಕಾರಿ ಪ್ರಿವೆಂಟಿವ್ ಫೀಸರ್‌ಗಳಾದ ಮುರಳಿ ಕೆ.ವಿ, ಅಶ್ರಫ್ ಸಿ.ಕೆ, ಸಿವಿಲ್ ಎಕ್ಸೈಸ್ ಆಫೀಸರ್‌ಗ ಳಾದ ಪ್ರಜಿತ್ ಪಿ.ಆರ್, ನಾಸರುದ್ದೀನ್ ಎ.ಕೆ, ಶಿಲ್‌ಜಿತ್  ವಿ.ವಿ, ಪ್ರಿಷಿ ಪಿ.ಎಸ್, ಬಾಬು ವಿತ್ತಲ್, ಚಾಲಕ ಕ್ರಿಸ್ಟಿನ್ ಪಿ.ಎ. ಎಂಬವರು ಒಳಗೊಂಡಿದ್ದರು.

RELATED NEWS

You cannot copy contents of this page