ಅಯೋಧ್ಯೆ ಕ್ಷೇತ್ರಯಾತ್ರೆಗಾಗಿ ಬಿಜೆಪಿಯಿಂದ ಜ. ೨೫ರಿಂದ ಯಾತ್ರಾ ಸೌಕರ್ಯ ವಸತಿ, ಆಹಾರಕ್ಕೂ ಅಗತ್ಯದ ವ್ಯವಸ್ಥೆ

ತಿರುವನಂತಪುರ: ಅಯೋಧ್ಯೆ ಶ್ರೀರಾಮ ಕ್ಷೇತ್ರ ದರ್ಶನ ನಡೆಸುವವರಿಗಾಗಿ ಬಿಜೆಪಿ ವಿಶೇಷ ಯಾತ್ರಾ ಸೌಕರ್ಯ ಏರ್ಪಡಿಸಿದೆ.

ಇದರಂತೆ   ಕೇರಳ ಸೇರಿದಂತೆ ರಾಜ್ಯದಾದ್ಯಂತವಾಗಿ ಜನವರಿ ೨೫ರಿಂದ  ಈ ಯಾತ್ರಾ ಸೌಕರ್ಯ ಏರ್ಪಡಿಸಲಾಗಿದೆ. ಮಾರ್ಚ್ ೨೫ರ ತನಕ ಇದು ಮುಂದುವರಿಯಲಿದೆ.  ಇದರಂತೆ ಪ್ರತಿದಿನ ದೇಶದ ವಿವಿಧ ರಾಜ್ಯಗಳಿಂದಾಗಿ ೫೦,೦೦೦ ಭಕ್ತರಿಗೆ ಯಾತ್ರಾ ಸೌಕರ್ಯ ಏರ್ಪಡಿಸ ಲಾಗುವುದು.  ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಇದಕ್ಕಿರುವ ಸೌಕರ್ಯ ಏರ್ಪಡಿಸಲಾಗುವುದು.  ಹೀಗೆ ಅಯೋಧ್ಯೆಗೆ ಯಾತ್ರೆ ನಡೆಸು ವವರಿಗೆ ಅಗತ್ಯದ ಆಹಾರ ಮತ್ತು ವಸತಿ ಸೌಕರ್ಯವನ್ನು ಅಯೋಧ್ಯೆ ಯಲ್ಲಿ ಏರ್ಪಡಿಸುವ ತೀರ್ಮಾ ನವನ್ನು ಬಿಜೆಪಿ ಕೈಗೊಂಡಿದೆ.

Leave a Reply

Your email address will not be published. Required fields are marked *

You cannot copy content of this page