ಆರ್ಯಸಮಾಜದ ಕುಂಟಾರು ವಲಯ ಸಮಾವೇಶ 18ರಂದು
ಮುಳ್ಳೇರಿಯ: ಆರ್ಯ ಮರಾಠ ಸಮಾಜ ಮಂಗಳೂರು-ಕಾಸರಗೋಡು ಇದರ ಕುಂಟಾರು ವಲಯ ಸಮಾವೇಶ ಮೇ ೧೮ರಂದು ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರ ಪರಿಸರದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ೯.೩೦ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಆರಂಭ, ಮಧ್ಯಾಹ್ನ ಮಹಾಮಂಗಳಾರತಿ, ಅನ್ನಸಂತರ್ಪಣೆ, ೧.೩೦ರಿಂದ ನಡೆಯುವ ಸಭಾಕಾರ್ಯಕ್ರಮವನ್ನು ಸಮಾಜ ಸಂಘದ ಗೌರವಾಧ್ಯಕ್ಷೆ ಪ್ರೇಮಲತಾ.ವೈ. ರಾವ್ ಉದ್ಘಾಟಿ ಸುವರು, ಆರ್ಯ ಸಮುದಾಯ ಸಂಘದ ಕೋಶಾಧಿಕಾರಿ ಪ್ರಕಾಶ. ಎಂ. ಅಧ್ಯಕ್ಷತೆ ವಹಿಸುವರು. ಆರ್ಯ ಮರಾಠ ಸಮಾಜ ಸಂಘದ ಅಧ್ಯಕ್ಷ ಮೋಹನ್ ರಾವ್, ಆರ್ಯ ಸಮುದಾಯ ಸಂಘ ಕಾಸರಗೋಡು ಇದರ ಅಧ್ಯಕ್ಷ ಗಿರಿಧರ್ ರಾವ್ ಚೊಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿ ಸುವರು.
ಈ ಸಂದರ್ಭದಲ್ಲಿ ದಿ| ಪುರುಷೋತ್ತಮ ರಾವ್ ಮಾಟೆಡ್ಕ ಅವರ ಸಂಸ್ಮರಣೆ, ಸಾಧಕರಿಗೆ ಅಭಿನಂದನೆ, ಗೌರವಾರ್ಪಣೆ, ಶಿಕ್ಷಣ ಮತ್ತು ಕ್ರೀಡಾ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಸಮಾಜ ಸಂಘದ ಉಪಾಧ್ಯಕ್ಷ ಕೆ.ರಾಜೇಶ್ ಎಡನೀರು, ಗಿರೀಶ್ ರಾವ್, ಕಾರ್ಯದರ್ಶಿ ನಿಖಿಲ್, ಜೊತೆ ಕಾರ್ಯದರ್ಶಿ ಕುಸುಮಾಕರ, ಕೋಶಾಧಿಕಾರಿ ಉದಯಶಂಕರ್, ಜೊತೆ ಕಾರ್ಯದರ್ಶಿ ಶಿಶುಪಾಲ, ಅಂಬಾಭವಾನಿ ಟ್ರಸ್ಟ್ನ ಕಾರ್ಯದರ್ಶಿ ನಾಗರಾಜ ಸಿಂಧ್ಯಾ, ಯುವವೇದಿಕೆ ಸಂಚಾಲಕ ಶೈಲೇಶ್, ಮಹಿಳಾ ಘಟಕದ ಸಂಚಾ ಲಕಿಯರಾದ ಪೂರ್ಣಿಮಾ ಹರೀಶ್, ಉಷಾ ರಾಜೇಶ್ವರ್, ಕುಂಟಾರು ವಲಯ ಸಂಚಾಲಕ ವಾಸು ಮಾಟೆಡ್ಕ ಭಾಗವಹಿಸುವರು.