ಆಸ್ಪತ್ರೆಯಲ್ಲಿ ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಆರೋಪಿಗಳಿಬ್ಬರ ಸೆರೆ
ಕಾಸರಗೋಡು: ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಇಬ್ಬರು ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಪನಿಯಲ್ ಚೆರುಂಬ ನಿವಾಸಿ ಗಳಾದ ಬಷೀರ್ (೫೧) ಮತ್ತು ಅಬ್ದುಲ್ ರಹಿಮಾನ್ (೩೮) ಬಂಧಿತರಾದ ಆರೋಪಿಗಳು. ಇವರಿ ಬ್ಬರು ನೇರವಾಗಿ ನ್ಯಾಯಾಲಯದಲ್ಲಿ ಶರಣಾಗಿದ್ದರು. ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಜನವರಿಯಲ್ಲಿ ಚೆರುಂಬದಲ್ಲಿ ಪುಟ್ಭಾಲ್ ಪಂದ್ಯಾಟ ನಡೆಸುತ್ತಿದ್ದ ವೇಳೆ ಅದರ ಆಟಗಾರರು ಪರಸ್ಪರ ಹೊಡೆದಾಡಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ನೀಡಲಾದ ದೂರಿನಂತೆ ಬೇಕಲ ಪೊಲೀಸರು ಬಶೀರ್ ಮತ್ತು ಅಬ್ದುಲ್ ರಹಿಮಾನ್ರನ್ನು ವಶಕ್ಕೆ ತೆಗೆದುಕೊಂಡು ಬಳಿಕ ಚೆಂಗಳದ ಆಸ್ಪತ್ರೆಯಲ್ಲಿ ಪೊಲೀಸರ ಕಾವಲಿನಲ್ಲಿ ದಾಖಲಿಸಿದ್ದರು. ಫುಟ್ಭಾಲ್ ಆಟದ ವೇಳೆ ಉಂಟಾದ ಘಷಣೆಯಲ್ಲಿ ಇವರಿಬ್ಬರೂ ಗಾಯಗೊಂಡಿದ್ದರು. ಹೀಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಕಳೆಯುತ್ತಿದ್ದ ವೇಳೆ ಅವರಿಬ್ಬರು ಕಳೆದ ಜನವರಿ ೧೬ರಂದು ಪೊಲೀಸರ ಕಣ್ತಪ್ಪಿಸಿ ಆಸ್ಪತ್ರೆಯಿಂದ ತಪ್ಪಿಸಿಕೊಂ ಡಿದ್ದರು. ಅದಕ್ಕೆ ಸಂಬಂಧಿಸಿ ಅವರ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಅವರಿಬ್ಬರನ್ನು ಈಗ ಬಂಧಿಸಲಾಗಿದೆ.