ಇಲಿ ವಿಷ ಸೇವಿಸಿದ ವ್ಯಕ್ತಿ ಮೃತ್ಯು
ಹೊಸದುರ್ಗ: ಇಲಿವಿಷ ಸೇವಿಸಿದ ಹಿನ್ನೆಲೆಯಲ್ಲಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ನಿಧನ ಹೊಂದಿದರು. ಮಡಿಕೈ ಕೋತೋಟುಪ್ಪಾರ ನಿವಾಸಿ ಎ. ಕುಂಞಿಕೃಷ್ಣನ್ (63) ಮೃತರಾದವರು. ಆತ್ಮಹತ್ಯೆಗೈದಿ ರಬೇಕೆಂದು ಶಂಕಿಸಲಾಗಿದ್ದು, ಆದರೆ ಕಾರಣ ಸ್ಪಷ್ಟವಾಗಿಲ್ಲ. ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಇದೇ ವೇಳೆ ಎರಡೂವರೆ ತಿಂಗಳಲ್ಲಿ ಇಲಿ ವಿಷ ಸೇವಿಸಿ ಜಿಲ್ಲೆಯಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರ ಹೊರತಾಗಿ ಈಗಲೂ ಕೆಲವರು ಚಿಕಿತ್ಸೆಯಲ್ಲಿದ್ದಾರೆ. ನಿಧಾನ ವಿಷವಾದ ಇಲಿವಿಷವನ್ನು ಜಾಗರೂಕತೆಯಿಂದ ಹಿಡಿತದಲ್ಲಿಟ್ಟುಕೊಳ್ಳದಿದ್ದರೆ ಅಪಾಯಕಾರಿ ಯಾಗಬಹುದೆಂದು ಪೊಲೀಸರು ಸೂಚಿಸಿದ್ದಾರೆ. ಆದರೆ ಇಲಿವಿಷವನ್ನು ಮಾರಾಟಮಾಡುವುದಕ್ಕೆ ಯಾವುದೇ ರೀತಿಯಲ್ಲಿರುವ ನಿಯಂತ್ರ ಣವಿಲ್ಲ. ಆದುದರಿಂದ ಇಲಿವಿಷದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಅಭಿಪ್ರಾಯಪಡಲಾಗಿದೆ.