ಎಡರಂಗ ಸರಕಾರ ಕೇರಳವನ್ನು ಸ್ಮಾರ್ಟಾಗಿಸಿದೆ-ಇ.ಚಂದ್ರಶೇಖರನ್

ಮಂಜೇಶ್ವರ: ಎಡರಂಗ ಸರಕಾರ ಕೇರಳವನ್ನು ಸ್ಮಾರ್ಟಾಗಿಸಿದೆ ಎಂದು ಸಿಪಿಐ ರಾಜ್ಯ ಸಹ ಕಾರ್ಯದರ್ಶಿ, ಶಾಸಕ ಇ. ಚಂದ್ರಶೇಖರನ್ ಹೊಸಂಗಡಿ ಬಿ.ವಿ ರಾಜನ್ ವೇದಿಕೆಯಲ್ಲಿ ನಡೆದ ಸಿಪಿಐ ಮಂಜೇಶ್ವರ ಮಂಡಲ ಸಮ್ಮೇಳನದ ಪ್ರತಿನಿಧಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಎಡರಂಗ ಸರಕಾರ ಎಲ್ಲಾ ವಲಯಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಕೇರಳವು ಕಡು ಬಡವರಿಲ್ಲದ ರಾಜ್ಯವಾಗುವ ಗುರಿಯತ್ತ ಸಾಗುತ್ತಿದೆ.600 ಗ್ರಾಮ ಕಚೇರಿಗಳು ಸ್ಮಾರ್ಟ್ ಆಗಿದೆ.ಪಡಿತರ ಅಂಗಡಿಗಳು ಕೆ. ಸ್ಟೋರ್ ಆಗಿ ಬದಲಾಗುತ್ತಿವೆ.ಈಗಾಗಲೇ 1959 ಪಡಿತರ ಅಂಗಡಿಗಳನ್ನು ಸ್ಮಾರ್ಟ್ ಮಾಡಲಾಗಿದೆ. ಆರೋಗ್ಯ ರಂಗದಲ್ಲಿ ಸರಕಾರಿ ಆಸ್ಪತ್ರೆಗಳು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿವೆ.ವಯನಾಡ್ ಟೌನ್ ಶಿಫ್ ಯೋಜನೆಗಾಗಿ ರಾಜ್ಯ ಸರಕಾರ 351 ಕೊಟಿ ರೂಪಾಯಿ ಖರ್ಚು ಮಾಡುತ್ತಿದೆ.ಕೇಂದ್ರ ಸರಕಾರ ಕೇರಳವನ್ನು ಆರ್ಥಿಕವಾಗಿ ತುಳಿದಾಗಲೂ ನಾವು ಹಿಂಜರಿಯಲಿಲ್ಲ ಎಂದು ಚಂದ್ರಶೇಖರನ್ ಹೇಳಿದರು.ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ ಬಾಬು, ಎಐಟಿಯುಸಿ ರಾಜ್ಯ ಉಪಾಧ್ಯಕ್ಷÀ ಕೆ.ವಿ ಕೃಷ್ಣನ್, ಪಿ. ಭಾರ್ಗವಿ, ಸುಂದರಿ ಆರ್. ಶೆಟ್ಟಿ ಮಾತನಾಡಿದರು. ರಾಮಕೃಷ್ಣ ಕಡಂಬಾರ್, ಚಿತ್ರಾವತಿ ಅಂಜರೆ, ಅಜಿತ್ ಎಂ.ಸಿ ಲಾಲ್ ಬಾಗ್ ಒಳಗೊಂಡ ನಿಯಂತ್ರಣ ಮಂಡಳಿ ಸಮ್ಮೇಳನ ನಿಯಂತ್ರಿಸಿದೆ. ಹಿರಿಯ ನೇತಾರ ಎಂ. ಸಂಜೀವ ಶೆಟ್ಟಿ ಧ್ವಜಾರೋಹಣಗೈದರು. ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್ ಸ್ವಾಗತಿಸಿ, ಎಸ್. ರಾಮಚಂದ್ರ ಬಡಾಜೆ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page