ಎನ್ಜಿಒ ಸಂಘ್ ಜಿಲ್ಲಾ ಸಮ್ಮೇಳನ ಇಂದು ಅಪರಾಹ್ನ ಆರಂಭ
ಕಾಸರಗೋಡು: ಕೇರಳ ಎನ್ಜಿಒ ಸಂಘದ ಜಿಲ್ಲಾ ಸಮ್ಮೇಳನ ಇಂದು ಅಪರಾಹ್ನ ಆರಂಭಗೊ ಳ್ಳಲಿದೆ. ಸಮ್ಮೇಳನದಂಗವಾಗಿ ನಗರದ ಕರಂದಕ್ಕಾಡ್ನಲ್ಲಿರುವ ಎನ್ಜಿಒ ಸಂಘ್ ಹಾಲ್ನಲ್ಲಿ ಇಂದು ಅಪರಾಹ್ನ ಸಂಘದ ರಾಜ್ಯ ಕೌನ್ಸಿಲ್ ಸಭೆ ಜರಗಲಿದ್ದು, ಅದನ್ನು ಸಂಘದ ರಾಜ್ಯ ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯ ಪಿ. ಪೀತಾಂಭರನ್ ಉದ್ಘಾಟಿಸು ವರು. ಜಿಲ್ಲಾಧ್ಯಕ್ಷ ಕೆ. ರಂಜಿತ್ ಅಧ್ಯಕ್ಷತೆ ವಹಿಸುವರು. ನಾಳೆ ಬೆಳಿಗ್ಗೆ 10ಗಂಟೆಗೆ ಕಾಸರಗೋಡು ಟೌನ್ ಬ್ಯಾಂಕ್ ಹಾಲ್ನಲ್ಲಿ ನಡೆಯಲಿರುವ ಪ್ರತಿನಿಧಿ ಸಮ್ಮೇಳನವನ್ನು ಸಂಘಟ ನೆಯ ರಾಜ್ಯ ಕಾರ್ಯದರ್ಶಿ ಕೆ. ಗೋಪಾಲಕೃಷ್ಣನ್ ಉದ್ಘಾಟಿಸುವರು.