ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ವರ್ಷಾವಧಿ ವಿಷುಜಾತ್ರೆಗೆ ಭಾನುವಾರ ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ದ್ವಜಾರೋಹಣಗೊಂಡಿತು. ಬಳಿಕ ಬಲಿ ಉತ್ಸವ ನಡೆಯಿತು. ಹರಿಶ್ಚಂದ್ರ ಆಚಾರ್ಯ ಬೇಕೂರು ಇವರು ಸೇವೆಯಾಗಿ ನೀಡಿದ ನೂತನ ಪಲ್ಲಕ್ಕಿಯನ್ನು ಶ್ರೀ ದೇವರಿಗೆ ಸಮರ್ಪಿಸಲಾಯಿತು. ಈ ತಿಂಗಳ 18ರಂದು ಜಾತ್ರೆ ಸಮಾಪ್ತಿಗೊಳ್ಳಿದೆ.