ಕರುಳು ದಾನದ ಹೆಸರಲ್ಲಿ ಹಣ ಪಡೆದು ವಂಚನೆ ದೂರು: ಕೇಸು ದಾಖಲು
ಕಾಸರಗೋಡು: ಅಸೌಖ್ಯದಿಂದ ಬಳಲುತ್ತಿರುವ ಒಂಭತ್ತು ವರ್ಷದ ಗಂಡು ಮಗುವಿಗೆ ಸೂಕ್ತ ಕರುಳುದಾನ ಮಾಡುವ ವ್ಯಕ್ತಿಯನ್ನು ಗುರುತಿಸಿ ಸಹಾಯ ಮಾಡುವುದಾಗಿ ನಂಬಿಸಿ ಹಣ ಪಡೆದು ಬಳಿಕ ವಂಚನೆಗೈದ ಬಗ್ಗೆ ಆ ಮಗುವಿನ ತಾಯಿ ನೀಡಿದ ದೂರಿನಂತೆ ಯುವತಿಯೋರ್ವೆ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ತೆಕ್ಕಿಲ್ ಗ್ರಾಮದ 28ರ ಹರೆ ಯದ ಯುವತಿ ಈ ಬಗ್ಗೆ ಪೊಲೀ ಸರಿಗೆ ದೂರು ನೀಡಿದ್ದು ಅದರ ಆಧಾರದಲ್ಲಿ ಕೇಸು ದಾಖಲಿಸಲಾಗಿದೆ. ತನ್ನ ಪುತ್ರನಿಗೆ ಕರುಳುದಾನಹಗೈ ಯ್ಯುವವರನ್ನು ಗುರುತಿಸಿ ಅವರಿಂದ ಕರುಳುದಾನ ನಡೆಸುವುದಾಗಿ ನಂಬಿಸಿ ಆರೋಪಿ 2023 ಫೆಬ್ರವರಿಯಲ್ಲಿ 1 ಲಕ್ಷ ರೂ.ವನ್ನು ಆ ಬಳಿಕ 2023 ಮೇ ತಿಂಗಳಲ್ಲಿ ಬ್ಯಾಂಕ್ ಚೆಕ್ ಮೂಲಕ ಏಳು ಲಕ್ಷ ರೂ. ಪಡೆದುಕೊಂಡಳೆAದು ನಂತರ ಕರುಳುದಾನ.. ಗುರುತಿಸದೆ ನೀಡಿದ ಹಣದ ಪೈಕಿ 3 ಲಕ್ಷ ರೂ.ವನ್ನು ಹಿಂತಿರುಗಿಸದೆ ಆರೋಪಿ ತನಗೆ ವಂಚನೆಗೈದಿರುವುದಾಗಿ ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ.