ಕುಂಟಾರು ದೇಗುಲ ಜಾತ್ರೋತ್ಸವ ಮಾ. 29ರಿಂದ
ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ವಾರ್ಷಿಕ ಜಾತ್ರೋತ್ಸವ ಮಾರ್ಚ್ 29ರಿಂದ 31ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ.
29ರಂದು ಬೆಳಿಗ್ಗೆ 8.30ರಿಂದ ಗಣಪತಿಹೋಮ, ನವಕ, 9ರಿಂದ ಶ್ರೀ ಅಯ್ಯಪ್ಪ ಭಜನಾ ಸಂಘ ಕುಂಟಾರು, 10ರಿಂದ ಶ್ರೀ ಮೂಕಾಂಬಿಕಾ ಭಜನಾ ಸಂಘ ಉಯಿತ್ತಡ್ಕ, 11ಕ್ಕೆ ಹರಿಪ್ರಿಯಾ ಮಹಿಳಾ ಭಜನಾ ಸಂಘ ಮುಳ್ಳೇರಿಯ ಇವರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 2ರಿಂದ ಶ್ರೀಕೃಷ್ಣ ಮಹಿಳಾ ಕುಣಿತ ಭಜನಾ ಸಂಘ ಕುಂಟಾರು, 3ರಿಂದ ಗಜಕರ್ಣ ಕುಣಿತ ಭಜನಾ ಸಂಘ ಅಂಬುಕುAಜೆ ಮಜಕ್ಕಾರು, ಸಂಜೆ 4.30ಕ್ಕೆ ಶ್ರೀಕೃಷ್ಣ ಬಾಲಕುಣಿತ ಭಜನಾ ಸಂಘ ಕುಂಟಾರು ಇವರಿಂದ ಕುಣಿತ ಭಜನೆ ನಡೆಯಲಿದೆ. 5.30ಕ್ಕೆ ಶ್ರೀ ಅಯ್ಯಪ್ಪ ಕುಣಿತ ಭಜನಾ ಸಂಘ ಶಕ್ತಿನಗರ ಗಾಳಿಮುಖ ಇವರಿಂದ ಭಜನೆ, 6.30ಕ್ಕೆ ತಾಯಂಬಕ, ಕುಂಟಾರು ಶಾರದಾ ಸಂಗೀತ ಶಾಲೆಯ ಮಕ್ಕಳಿಂದ ಭಜನಾಮೃತ, ರಾತ್ರಿ 7.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8.30ಕ್ಕೆ ಶ್ರೀದೇವರ ಭೂತಬಲಿ ಉತ್ಸವ, ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ ನಡೆಯಲಿದೆ.
30ರಂದು ಬೆಳಿಗ್ಗೆ 6ರಿಂದ ಶ್ರೀ ದೇವರ ಉತ್ಸವ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, 10ರಿಂದ ಶ್ರೀ ಅಣ್ಣಪ್ಪ ಪಂಜುರ್ಲಿ ಭಜನಾ ಸಂಘ ಕಟ್ಟತ್ತಬಯಲು ಇವರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6.30ಕ್ಕೆ ಓಂಕಾರ ಕುಣಿತ ಭಜನಾ ಸಂಘ ಕುಂಟಾರು ಇವರಿಂದ ಕುಣಿತ ಭಜನೆ, 7ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾ ರು ಆಶೀರ್ವಚನ ನೀಡುವರು. ದೇಗುಲ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್.ಯು ಅಧ್ಯಕ್ಷತೆ ವಹಿ ಸುವರು, ನ್ಯಾಯವಾದಿ ಶಿವರಾಮ ಮಣಿಯಾಣಿ ಮಿಂಚಿಪದವು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಹಿಂದೂ ಐಕ್ಯವೇದಿ ರಾಜ್ಯ ಕಾರ್ಯದರ್ಶಿ ಪಿ.ವಿ.ಮುರಳೀಧರನ್ ಧಾರ್ಮಿಕ ಭಾಷಣ ಮಾಡುವರು, ಈ ಸಂದರ್ಭದಲ್ಲಿ ಹಿರಿಯರಿಗೆ ಗೌರವಾ ರ್ಪಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ರಾತ್ರಿ 7.30ಕ್ಕೆ ರಂಗಪೂಜೆ, ಅನ್ನದಾನ, 9ರಿಂದ ಕುಂಟಾರು ಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾಸಂಘ ಕುಂಟಾರು ಇವರಿಂದ ಯಕ್ಷಗಾನ ಬಯಲಾಟ ಶ್ವೇತಕುಮಾರ ಚರಿತ್ರೆ ನಡೆಯಲಿದೆ.
ಮಾ.31ರಂದು ಬೆಳಿಗ್ಗೆ 9ಕ್ಕೆ ಕುಂಟಾರು ಚಾಮುಂಡಿ ದೈವದ ನೇಮ, 11.30ಕ್ಕೆ ಪಡೈ ಚಾಮುಂಡಿ ದೈವದ ನೇಮ, ಸಂಜೆ 4ಕ್ಕೆ ವೆಳುತೇಡನ್ ತರವಾಡು ಪರಿಸರದಲ್ಲಿ ಕುಂಟಾರು ಚಾಮುಂಡಿ ದೈವದ ನೇಮ ನಡೆಯಲಿದೆ.