ಕುಡಿಯಲು ನೀರು ಕೇಳಿ ತಲುಪಿದ ಯುವಕನಿಂದ ಮಾನಭಂಗ ಯತ್ನ: ಆರೋಪಿ ಸೆರೆ

ಕಾಸರಗೋಡು: ನೀರು ಕೇಳಿ ತಲುಪಿದ ಯುವಕ ಯುವತಿಯನ್ನು ಮಾನಭಂಗ ಪಡಿಸಲು ಯತ್ನಿಸಿರುವುದಾಗಿ ದೂರಲಾಗಿದೆ. ಯುವತಿಯ ದೂರಿನಂತೆ ಕೇಸು ದಾಖಲಿಸಿದ ಆದೂರು ಪೊಲೀಸರು  ಆರೋಪಿಯಾದ ಕೊನ್ನಕ್ಕಾಡ್ ನಿವಾಸಿ ಅಜಿತ್ (22)ನನ್ನು ಬಂಧಿಸಿದ್ದಾರೆ.  ಆರೋಪಿಗೆ ನ್ಯಾಯಾಲಯ ಎರಡು ವಾರ ನ್ಯಾಯಾಂಗ ಬಂಧನ ವಿಧಿಸಿದೆ. ನಿನ್ನೆ ಬೆಳಿಗ್ಗೆ10.30ಕ್ಕೆ ಘಟನೆ ನಡೆದಿದ್ದು, ಮನೆ ಸಮೀಪದಲ್ಲಿ ಬಟ್ಟೆಬರೆ ಒಗೆದುಕೊಂಡಿದ್ದ ಯುವತಿಯಲ್ಲಿ ಕುಡಿಯಲು ನೀರು ಕೇಳಿ ತಲುಪಿದ ಅಜಿತ್ ಮಾನಭಂಗಪಡಿಸಲು ಯತ್ನಿಸಿರುವುದಾಗಿ ದೂರಲಾಗಿದೆ. ಯುವತಿ ಬೊಬ್ಬೆ ಹಾಕಿದಾಗ ಆರೋಪಿ ಪರಾರಿಯಾಗಿದ್ದಾನೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.

You cannot copy contents of this page