ಕೇರಳಕ್ಕೆ ಸಾಗಿಸುತ್ತಿದ್ದ 37 ಲಕ್ಷ ರೂ. ಪತ್ತೆ

ಕಾಸರಗೋಡು: ಕಾರಿನಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದ 37 ಲಕ್ಷ ರೂ.ವನ್ನು ಕರ್ನಾಟಕ  ಚಾಮರಾಜ ನಗರದ ಮದ್ದೂರು ತಪಾಸಣಾ ಕೇಂದ್ರದಿಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಲ್ಲಿಕೋಟೆ ನಿವಾಸಿಗಳೂ ಹಾಗೂ ಹೋಟೆಲ್ ಉದ್ಯಮಿ ಗಳಾಗಿರುವ ಪಿ.ಆರ್. ರಾಹುಲ್ (33) ಮತ್ತು ಸಿ.ಕೆ. ಪಾಲ್ವಿನ್ (33) ಎಂಬವರು ಚಲಾಯಿಸುತ್ತಿದ್ದ ಕಾರಿ ನಿಂದ ಈ ಮಾಲು ವಶಪಡಿಸಲಾಗಿದೆ.  ಈ ತಪಾಸಣಾ ಕೇಂದ್ರದಲ್ಲಿ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಗಂಡು ಪೇಟೆಯಿಂದ ಕೇರಳಕ್ಕೆ ಬರುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ  ಆ ಕಾರಿನ ಎದುರುಗಡೆ ಸೀಟಿನ ಭಾಗದಲ್ಲಿ ಬಚ್ಚಿಡಲಾಗಿದ್ದ 20 ಲಕ್ಷ ರೂ. ಪತ್ತೆಯಾಗಿದೆ. ಅದರಿಂದ ಶಂಕೆಗೊಂಡ ಪೊಲೀಸರು ಆ ಕಾರನನ್ನು ಇನ್ನಷ್ಟು ತಪಾಸಣೆಗೊಳಪಡಿಸಿದಾಗ ಆ ಕಾರಿನ  ಹಿಂದುಗಡೆ ಸೀಟಿನಲ್ಲಿದ್ದ ಬ್ಯಾಗ್‌ನಲ್ಲಿ ಮತ್ತೆ 12 ಲಕ್ಷ ರೂ. ಪತ್ತೆಯಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಸರಿಯಾದ ದಾಖಲುಪತ್ರಗಳಿಲ್ಲದೆ ಹಣ ಸಾಗಿಸಲಾಗುತ್ತಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page