ಕೇರಳದ ಮೂರು ಕ್ಷೇತ್ರಗಳ ಬಿಜೆಪಿ ಉಮೇದ್ವಾರರ ಘೋಷಣೆ ಮುಂದಿನ ವಾರ

ತೃಶೂರು: ಕೇರಳದ ಒಟ್ಟು ೨೦ ಲೋಕಸಭಾ ಕ್ಷೇತ್ರಗಳ ಪೈಕಿ ತೃಶೂರು ಸೇರಿದಂತೆ ಮೂರು ಲೋಕಸಭಾ ಕ್ಷೇತ್ರಗಳ ಉಮೇದ್ವಾರರನ್ನು ಬಿಜೆಪಿ ಮುಂದಿನವಾರ ಪ್ರಕಟಿಸುವ ಸಾಧ್ಯತೆಯಿದೆ. ತೃಶೂರಿನಲ್ಲಿ ನಟ ಸುರೇಶ್ ಗೋಪಿ ಸ್ಪರ್ಧಿಸುವರೆಂದು ಈಗಾಗಲೇ ಖಚಿತಗೊಂಡಿದೆ. ತಿರುವನಂತಪುರ ಮತ್ತು ಪತ್ತನಂತಿಟ್ಟ ಲೋಕಸಭಾ ಕ್ಷೇತ್ರಗಳು ಬಿಜೆಪಿ ಪ್ರಧಾನವಾಗಿ ತನ್ನ ಗುರಿಯನ್ನಾಗಿಸಿದೆ. ಮುಂದಿನ ಲೋಕಸಭಾ ಚನಾವಣೆಯಲ್ಲಿ ಐದು ಸೀಟುಗಳನ್ನು ಗೆಲ್ಲುವ ತುಂಬು ನಿರೀಕ್ಷೆಯನ್ನು ಬಿಜೆಪಿ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *

You cannot copy content of this page