‘ಕೇರಳ’ ಇನ್ನು ‘ಕೇರಳಂ’: ನಿರ್ಣಯಕ್ಕೆ ವಿಧಾನಸಭೆಯ ಸರ್ವಾನುಮತದ ಅಂಗೀಕಾರ

ತಿರುವನಂತಪುರ: ದೇವರ ನಾಡು ಎಂದೇ ಖ್ಯಾತಿ ಹೊಂದಿರುವ ಕೇರಳ ರಾಜ್ಯದ ಹೆಸರ ಇನ್ನು ‘ಕೇರಳಂ’ ಎಂದು ಬದಲಾಗಲಿದೆ. ಭಾಷಾ ಆಧಾರದ ಮೇಲೆ ಮಲೆಯಾಳಿಗರ ರಾಜ್ಯವಾಗಿ ರೂಪುಗೊಂಡಿರುವ ಕೇರಳದ ಹೆಸರನ್ನು  ‘ಕೇರಳಂ’ ಎಂದು ಮರು ನಾಮಕರಣಗೊಳಿಸಲಾಗಿದೆ.

ರಾಜ್ಯದ ಹೆಸರನ್ನು ಬದಲಿಸುವ ನಿರ್ಣಯವನ್ನು ರಾಜ್ಯ ವಿಧಾನಸಭೆಯಲ್ಲಿ ನಿನ್ನೆ ಅಂಗೀಕರಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸದನದಲ್ಲಿ ಈ ನಿರ್ಣಯ ಮಂಡಿಸಿದ್ದರು. ಈ ನಿರ್ಣಯಕ್ಕೆ ಆಡಳಿತ ಪಕ್ಷಗಳು, ವಿಪಕ್ಷವಾದ ಯುಡಿಎಫ್ ಮತ್ತು ಖಜಾನೆ ಪೀಠಗಳು  ಸರ್ವಾನುಮತದಿಂದ ಅಂಗೀಕಾರ ನೀಡಿದೆ.

ರಾಜ್ಯದ ಹೆಸರನ್ನು ಮಲೆಯಾಳಂನಲ್ಲಿ ‘ಕೇರಳಂ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ನಂತರ ನಿರ್ಣಯ ಮಂಡಿಸಿ ಸಂವಿಧಾನದಲ್ಲಿ ರಾಜ್ಯವನ್ನು ‘ಕೇರಳಂ’ ಎಂದು ಮರು ನಾಮಕರಣ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಿದರು. ಇದೇ ನಿರ್ಣಯವನ್ನು ೨೦೨೩ ಆಗಸ್ಟ್‌ನಲ್ಲೂ ರಾಜ್ಯ ವಿಧಾನಸಭೆ ಅಂಗೀಕರಿಸಿತ್ತು. ಆದರೆ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಅದನ್ನು ನಿನ್ನೆ ಮತ್ತೊಮ್ಮೆ ಮಂಡಿಸಲಾಯಿತು. ಅದಕ್ಕೆ ವಿಧಾನಸಭೆ ಸರ್ವಾನುಮತದ ಅಂಗೀಕಾರ ನೀಡಿದೆ.

೧೯೫೬ ನವೆಂಬರ್ ೧ರಂದು ಭಾಷೆ ಆಧರಿಸಿ ರಾಜ್ಯಗಳನ್ನು ರಚಿಸಲಾಯಿತು. ಕೇರಳದ ಜನ್ಮದಿನವೂ ನವೆಂಬರ್ ೧ರಂದೇ ಆಗಿದೆ.  ಮಲಯಾಳಂ ಮಾತನಾಡುವ ಸಮುದಾಯಗಳ ಅಖಂಡ ಕೇರಳ ರಚಿಸುವ ಅಗತ್ಯವನ್ನು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಸಮಯದಿಂದಲೂ ಬಲವಾಗಿ ಹೊರ ಹೊಮ್ಮಿತ್ತು. ಆದರೆ ಹೆಸರನ್ನು ನಮ್ಮ ರಾಜ್ಯ ವನ್ನು ಸಂವಿಧಾನದ  ಮೊದಲ ಶೆಡ್ಯೂಲ್‌ನಲ್ಲಿ ಕೇರಳ ಎಂದು ಬರೆಯಲಾಗಿದೆ. ಅದನ್ನು ‘ಕೇರಳಂ’ ಎಂದು ಬದಲಾಯಿಸಬೇಕೆಂದು ಮುಖ್ಯಮಂತ್ರಿ ಹೇಳಿದರು.

Leave a Reply

Your email address will not be published. Required fields are marked *

You cannot copy content of this page