ಕೊಡಗರ ಕಪ್ಪು ಹಣ ಪ್ರಕರಣ: ಎನ್ಫೋರ್ಸ್ಮೆಂಟ್ ತನಿಖಾ ತಂಡದ ಕ್ರಮದ ವಿರುದ್ಧ ಹೊಸಂಗಡಿಯಲ್ಲಿ ಸಿಪಿಎಂ ಪ್ರತಿಭಟನೆ
ಮಂಜೇಶ್ವರ: ಕೊಡಗರ ಕಪ್ಪು ಹಣ ಪ್ರಕರಣದಲ್ಲಿ ಎನ್ಫೋರ್ಸ್ಮೆಂಟ್ ತನಿಖೆ ಕೈಗೊಳ್ಳದ ಬಗ್ಗೆ ನ್ಯಾಯಾಲಯ ಟೀಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಬಿಜೆಪಿ ನಾಯಕರನ್ನು ಸಂರಕ್ಷಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಿಪಿಎಂ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ೨೦೨೧ರಲ್ಲಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಜಾರ್ಜ್ಶೀಟ್ ನೀಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ರನ್ನು ವಿಚಾರಣೆಗೊಳಪಡಿಸಲಾಗಿತ್ತು. ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡರಾದ ಕೆ. ಕಮಲಾಕ್ಷ, ಡಿ. ಕಮಲಾಕ್ಷ, ಅಶೋಕ ಭಂಡಾರಿ, ಪ್ರಶಾಂತ್ ಕನಿಲ, ಕೆ. ಕರುಣಾಕರ ಶೆಟ್ಟಿ ನೇತೃತ್ವ ನೀಡಿದರು.