ಗುರಿಯನ್ನು ತಲುಪಲು ಶ್ರೇಷ್ಠವಾದ ಪ್ರಯತ್ನ ಅಗತ್ಯ-ಮಾಜಿ ಸೈನಿಕ ಅಚಲ ಎಂ.ಜಿ:  ಮುಳ್ಳೇರಿಯ ಮಂಡಲದ ಜೀವನಬೋಧ ಶಿಬಿರ ಉದ್ಘಾಟನೆ

ಬದಿಯಡ್ಕ: ಸೇನೆಯಲ್ಲಿ ಅನೇಕ ವಿಭಾಗಗಳಿವೆ. ಪ್ರತಿಯೊಬ್ಬನಿಗೂ ತನ್ನದೇ ಆದ ಜವಾಬ್ದಾರಿ ಇರುತ್ತದೆ. ಆದರೆ ಒಂದು ತಂಡದ ವ್ಯವಸ್ಥೆ ಇನ್ನೊಂ ದು ತಂಡಕ್ಕೆ ಗೊತ್ತಿರುವುದಿಲ್ಲ. ರಕ್ಷಣಾ ವಿಚಾರದಲ್ಲಿ ಯಾವುದೇ ರಾಜಿ ಇರುವುದಿಲ್ಲ. ನಿರ್ಧಿಷ್ಟವಾದ ಗುರಿಯನ್ನು ತಲುಪಲು ನಮ್ಮ ಶ್ರೇಷ್ಠ ಪ್ರಯತ್ನ ಇರಬೇಕು ಎಂದು ಮಾಜಿ ಸೈನಿಕ ಹವಾಲ್ದಾರ್ ಅಚಲ ಎಂ.ಜಿ  ಪುತ್ರಕಳ ಹೇಳಿದರು. ಶ್ರೀ ರಾಮ ಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಿನ್ನೆ ಆರಂಭವಾದ ಎರಡು ದಿನಗಳ ಜೀವನಬೋಧ ಶಿಬಿರವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ದೇಶಸೇವೆಯೆಂಬ ವಿಚಾರ ನಮ್ಮ ಮನದಲ್ಲಿ ಅಚಲವಾಗಿದ್ದರೆ ಯಾವುದೇ ಕಷ್ಟವನ್ನು ದಿಟ್ಟವಾಗಿ ಎದುರಿಸಿ ಮುನ್ನುಗ್ಗಲು ಸಾಧ್ಯವಿದೆ. ದೇಶಕ್ಕಾಗಿ ಯಾವುದೇ ತ್ಯಾಗಕ್ಕೆ ನಾವು ಸಿದ್ಧರಾಗಿರಬೇಕು ಎಂದರು.  ಶಿಬಿರಾಧಿಕಾರಿ ಬೇ.ಸಿ. ಗೋಪಾಲಕೃಷ್ಣ ಭಟ್, ಮುಳ್ಳೇರಿಯ ಹವ್ಯಕ ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ, ಡಾ| ವೈ.ವಿ. ಕೃಷ್ಣಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಲಸಿನಕಾಯಿಯ ಹಪ್ಪಳ ತಯಾರಿಗೆ ಚಾಲನೆ ನೀಡಲಾಯಿತು. ಶ್ರೀ ರಾಮಚಂದ್ರಾಪುರ ಮಠದ ಮಾತೃತ್ವಂ ಪ್ರಧಾನರಾದ ಈಶ್ವರಿ ಬೇರ್ಕಡವು ಹಪ್ಪಲ ತಯಾರಿಯ ಕುರಿತು ಮಾತನಾಡಿದರು. ನಂತರ ವಿದ್ಯಾರ್ಥಿಗಳು ಹಪ್ಪಳ ತಯಾರಿಸಿ zರು. ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿ ವಾಹಿನಿಯ ಶ್ಯಾಮ ಪ್ರಸಾದ್ ಕುಳಮರ್ವ ಸ್ವಾಗತಿಸಿದರು.

Leave a Reply

Your email address will not be published. Required fields are marked *

You cannot copy content of this page