ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಆರು ಲಕ್ಷ ರೂ. ವಶ

ಕಾಸರಗೋಡು: ಸರಿಯಾದ ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಆರು ಲಕ್ಷ ರೂ.ವನ್ನು ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಗುರುಪುರದಿಂದ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಪ್ಲೈಯಿಂಗ್ ಸ್ಕ್ವಾಡ್ (೧)ನ ಎಕ್ಸಿಕ್ಯೂಟಿವ್ ಮೆಜಿಸ್ಟ್ರೇಟ್ ಕೆ. ರಮೇಶ್ ಮತ್ತು ಎಸ್.ಐ ಮಧುಸೂದನನ್ ಮಡಿಕೈ ಇವರ ನೇತೃತ್ವದ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಪಡನ್ನಕ್ಕಾಡ್ ನಿವಾಸಿ ಹಾಗೂ ಈಗ ಅಂಬಲತ್ತರ ಪೊಲೀಸ್ ಠಾಣೆಯ ಇರಿಯಾದಲ್ಲಿ ವಾಸಿಸುವ ಮೊಯ್ದು ಎಂಬಾತನ ಕಾರಿನಿಂದ ಈ ಹಣ ವಶಪಡಿಸಲಾಗಿದೆ. ಎಕ್ಸಿಕ್ಯೂಟಿವ್ ಮೆಜಿಸ್ಟ್ರೇಟ್ ರಮೇಶ್‌ರ ನೇತೃತ್ವದ ತಂಡ ಗುರುಪುರದಲ್ಲಿ ನಿನ್ನೆ ಮಧ್ಯಾಹ್ನ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆ ದಾರಿಯಾಗಿ ಬಂದ ಮೊಯ್ದುವಿನ  ಕಾರನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಅದರಲ್ಲಿ ೫೦೦ ರೂ.ಗಳ ೧೨ ಕಟ್ಟು ಹಣ ಪತ್ತೆಯಾಗಿದೆ. ಬಳಿಕ ಅದನ್ನು ಕಾಞಂಗಾಡ್ ಸಬ್ ಟ್ರಶರಿಗೆ ಸಾಗಿಸಿ ಅಲ್ಲಿರಿಸಲಾಗಿದೆ.  ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ  ಪೊಲೀಸರಾದ ಸಂಶೀರ್ ಮತ್ತು ಜನಾರ್ದನನ್ ಎಂಬವರು ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page