ನಗರಸಭೆ ಮುಂಭಾಗ ಬಿಜೆಪಿ ಕೌನ್ಸಿಲರ್‌ಗಳಿಂದ ಪ್ರತಿಭಟನೆ

ಕಾಸರಗೋಡು: ನಗರಸಭೆಯ  ಕಾರ್ಯದರ್ಶಿಯನ್ನು ಬೆದರಿಸಿದ ಶಾಸಕ, ಮುಸ್ಲಿಂ ಲೀಗ್ ನಗರಸಭಾ ಆಡಳಿತಾಧಿಕಾರಿಗಳು ಕಾರ್ಯದರ್ಶಿ ಯವರಲ್ಲಿ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ. ಈ ಬೇಡಿಕೆ ಮುಂದಿಟ್ಟು ನಗರಸಭೆ ಮುಂಭಾಗದಲ್ಲಿ ಪ್ಲೇಕಾರ್ಡ್ ಸಹಿತ ಅವರು ಪ್ರತಿಭಟಿಸಿದರು. ಕಾಸರಗೋಡು ನಗರಸಭೆಯಲ್ಲಿ ಕಾರ್ಯದರ್ಶಿಗಳನ್ನು ಹಲ್ಲೆಗೈದು ಬೆದರಿಸುತ್ತಿರುವುದು ಸಾಮಾನ್ಯವಾಗುತ್ತಿದೆ. ಆಡಳಿತ ನಡೆಸುವವರು ಈ ರೀತಿಯ ದುಷ್ಕೃತ್ಯಗಳಿಗೆ ಜೊತೆ ಸೇರುತ್ತಿರುವುದರಿಂದಾಗಿ ಇದು ಸಂಭವಿಸುತ್ತಿದೆ. ನಿಜವಾಗಿ ನಗರಸಭೆಯ ಅಭಿವೃದ್ಧಿಗೆ ಪ್ರಧಾನ ಸವಾಲಾಗಿ ಇದು ಪರಿಣಮಿಸಿದೆ  ಎಂದು ಬಿಜೆಪಿ ಜನಪ್ರತಿನಿಧಿಗಳು ಆರೋಪಿಸಿದ್ದಾರೆ. ಅಧಿಕಾರಿಗಳು ನಗರಸಭೆಯಲ್ಲಿ ಸೇವೆ ಗೈಯ್ಯಲು ಹಿಂದೇಟು ಹಾಕುವುದರ ಪ್ರಧಾನ ಕಾರಣ ಇದಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕೌನ್ಸಿಲರ್‌ಗಳಾದ ರಮೇಶ್ ಪಿ, ಸವಿತಾ ಟೀಚರ್, ಉಮಾ ಕಡಪ್ಪುರಂ, ವರಪ್ರಸಾದ್ ಕೋಟೆಕಣಿ, ಅಶ್ವಿನಿ, ಹೇಮಲತಾ, ಪವಿತ್ರ, ಶಾರದಾ, ವಿಮಲ, ಶ್ರೀಲತಾ, ವೀಣಾ ಶೆಟ್ಟಿ, ರಂಜಿತ ಎಂಬಿವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page