ಪುತ್ತಿಗೆ ಪಂ. ಬಜೆಟ್ ವಸತಿ, ಕೃಷಿ ಯೋಜನೆಗಳಿಗೆ ಆದ್ಯತೆ

ಪುತ್ತಿಗೆ: ಪಂಚಾಯತ್ಗೆ 21,86,02,625 ರೂ.ಗಳ ಬಜೆಟನ್ನು ಉಪಾಧ್ಯಕ್ಷೆ ಬಿ.ಎಂ. ಜಯಂತಿ ಮಂಡಿಸಿದರು. 18,84,21,500 ರೂ. ವೆಚ್ಚ ನಿರೀಕ್ಷಿಸುವ ಕೃಷಿ ಅಭಿವೃದ್ಧಿ ಹಾಗೂ ಅಂಗನವಾಡಿಗಳಿಗೆ 70 ಲಕ್ಷ ರೂ.ನಂತೆಯೂ, ಆರೋಗ್ಯ ವಲಯಕ್ಕೆ 64 ಲಕ್ಷ ರೂ.ನಂತೆಯೂ ಮೀಸಲಿರಿಸಿದ ಬಜೆಟ್ನಲ್ಲಿ ಭಿನ್ನ ಸಾಮರ್ಥ್ಯದವರಿಗೆ, ಮಹಿಳಾ ಕ್ಷೇಮ ಪರಿಶಿಷ್ಟ ಜಾತಿ ಕ್ಷೇಮ, ಕುಡಿಯುವ ನೀರು ಯೋಜನೆಗಳು ಎಂಬಿವುಗಳಿಗೆ 24 ಲಕ್ಷ ರೂ.ನಂತೆ ಮೀಸಲಿಡಲಾಗಿದೆ. ಸಾರಿಗೆ ಸೌಕರ್ಯ, ವಯೋಜನ ಅಭಿವೃದ್ಧಿ, ಶಿಕ್ಷಣ ಚಟುವಟಿಕೆಗಳು ಎಂಬಿವುಗಳಿಗೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಪಾಲಾಕ್ಷ ರೈ, ಅಬ್ದುಲ್ ಮಜೀದ್ ಎಂ.ಎಚ್, ಅನಿತಾ ಎಂ, ಸದಸ್ಯರಾದ ಆಸಿಫ್ ಅಲಿ, ಪ್ರೇಮಾ ಎಸ್. ರೈ, ಕಾವ್ಯಶ್ರೀ ಬಿ.ಕೆ., ಅನಿತಶ್ರೀ, ಜಯಂತಿ, ಶಾಂತಿ ವೈ, ಗಂಗಾಧರ, ಕೇಶವ, ಮುಕುಂದನ್, ಡಾ. ಹಮೀದ್ ಶುಹೈಬ್, ಮುಖ್ಯೋಪಾಧ್ಯಾಯ ಅಬೂಬಕ್ಕರ್, ಕೃಷಿ ಅಧಿಕಾರಿ ದಿನೇಶ್, ಹೆಲ್ತ್ ಇನ್ಸ್ಪೆಕ್ಟರ್ ಮೋಹನನ್, ಹೆಡ್ ಕ್ಲರ್ಕ್ ಸಜಿ ವರ್ಗೀಸ್ ಮಾತನಾಡಿದರು.

Leave a Reply

Your email address will not be published. Required fields are marked *

You cannot copy content of this page