ಪೆರಿಯಾ ಅವಳಿ  ಕೊಲೆ ಪ್ರಕರಣ: ಆರೋಪಿಗಳಿಗೆ ಪರೋಲ್ ನೀಡಿದರೆ ಕಾನೂನು  ಸುವ್ಯವಸ್ಥೆ  ಉಂಟಾಗಲಿದೆ -ಪೊಲೀಸ್ ವರದಿ ಸಲ್ಲಿಕೆ

ಕಾಸರಗೋಡು: ಪೆರಿಯ ಕಲ್ಯೋಟ್‌ನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್‌ರನ್ನು ಕೊಲೆಗೈದ  ಪ್ರಕರಣದಲ್ಲಿ ಎರ್ನಾಕುಳಂ ಸಿಬಿಐ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿ ಈಗ ಜೈಲಿನಲ್ಲಿರುವ ಅಪರಾಧಿಗಳಿಗೆ ಪರೋಲ್ ಮಂಜೂರು ಮಾಡಿದರೆ ಅದು ಕಾನೂನು ಮತ್ತು ಸುವವಸ್ಥೆ ಸಮಸ್ಯೆ ಸೃಷ್ಟಿಗೆ  ದಾರಿ ಮಾಡಿಕೊಡಲಿದೆಯೆಂದು ಬೇಕಲ ಪೊಲೀಸರು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.  ಅವಳಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಈಗ ಜೈಲಿನಲ್ಲಿ ಕಳೆಯುತ್ತಿರುವ ಒಂದನೇ ಆರೋಪಿ ಎ. ಪೀತಾಂಭರನ್ ಮತ್ತು ನಾಲ್ಕನೇ ಆರೋಪಿ ಕೆ. ಅನಿಲ್ ಕುಮಾರ್ ತಮಗೆ ಪರೋಲ್ ಮಂಜೂರು ಮಾಡಬೇಕೆಂದು ಕೋರಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿ ಬೇಕಲ ಪೊಲೀಸರಿಂದ ವರದಿ ಕೇಳಲಾಗಿತ್ತು. ಅದರಂತೆ ಪೊಲೀಸರು  ಸಲ್ಲಿಸಿದ ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ.

ಇದೇ ಪ್ರಕರಣದ ೧೫ನೇ ಆರೋಪಿ ವಿಷ್ಣುಸುರ ಅಲಿಯಾಸ್ ಎ. ಸುರೇಂದ್ರನ್ ಪರೋಲ್‌ಗೆ  ಸಲ್ಲಿಸಿದ ಅರ್ಜಿಯನ್ನುಈ ಹಿಂದೆ  ತಿರಸ್ಕರಿಸಲಾಗಿತ್ತು. ಈ ಅವಳಿ ಕೊಲೆ ಪ್ರಕರಣದ ೧೦ ಮಂದಿ ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಸಜೆ ವಿಧಿಸಿದ್ದು, ಅವರು ಈಗ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page