ಪೇಟೆಗೆಂದು ತೆರಳಿದ ಯುವತಿ ನಾಪತ್ತೆ
ಉಪ್ಪಳ: ಉಪ್ಪಳ ಪೇಟೆಗೆಂದು ತೆರಳಿದ ಯುವತಿ ನಾಪತ್ತೆಯಾದ ಬಗ್ಗೆ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದೆ. ಮಣ್ಣಂಗುಳಿ ನಿವಾಸಿ ಇಬ್ರಾಹಿಂ ಬಾತಿಷ್ ಮಂಜಿಲ್ ನಿವಾಸಿ ಬಾತಿಷರ ಪತ್ನಿ ರಂಸೀನ (27) ನಾಪತ್ತೆಯಾದ ಬಗ್ಗೆ ಸಹೋದರ ಶರೀಫ್ ಎ. ಮಂಜೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಪೇಟೆಗೆ ತೆರಳಿ ಹಿಂತಿರುಗದ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.