ಬಂದಡ್ಕ ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವ ೧೫ರಿಂದ

ಬಂದಡ್ಕ: ಬಂದಡ್ಕ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವ ಡಿ. ೧೫ರಿಂದ ೧೭ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

೧೫ರಂದು ಬೆಳಿಗ್ಗೆ ೧೦ಕ್ಕೆ ಹೊರೆಕಾಣಿಕೆ ಮೆರವಣಿಗೆ ವಿವಿಧ ಭಾಗಗಳಿಂದ ಆಗಮಿಸಲಿದೆ. ೧೧ ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಶಾಸಕ ಸಿ.ಎಚ್. ಕುಂಞಂಬು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮುಖ್ಯ ಅತಿಥಿಯಾಗಿರುವರು. ಹಲವರು ಗಣ್ಯರು ಉಪಸ್ಥಿತರಿರುವರು. ಸಂಜೆ ೬.೩೦ಕ್ಕೆ ದೀಪಾರಾಧನೆ, ಶರಣಂವಿಳಿ, ೭ಕ್ಕೆ ಭಜನೆ, ರಾತ್ರಿ ೮ಕ್ಕೆ ಉತ್ಸವ ಕಮಿಟಿ ಮಾತೃಸಮಿತಿಯಿಂದ ಮೆಗಾ ತಿರುವಾದಿರ, ೯ಕ್ಕೆ ನೃತ್ಯ ವಿಸ್ಮಯಂ, ೧೬ರಂದು ಮುಂಜಾನೆ ೪ಕ್ಕೆ ಮಹಾಗಣಪತಿ ಹೋಮ, ೬.೩೦ಕ್ಕೆ ಹರಿನಾಮ ಕೀರ್ತನೆ, ಬೆಳಿಗ್ಗೆ ೮ರಿಂದ ಜ್ಞಾನಪಾನ, ಭಾಗವತ ಪಾರಾಯಣ,  ಮಧ್ಯಾಹ್ನ ೧೨ ಗಂಟೆಗೆ ಪೂಜೆ, ೧೨.೩೦ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ೩ಕ್ಕೆ ದೀಪಾರಾಧನೆ, ೬ಕ್ಕೆ ಪಾಲೆಕೊಂಬು ಮೆರವಣಿಗೆ ಆರಂಭ, ೭ಕ್ಕೆ ಭಜನೆ, ರಾತ್ರಿ ೧೦ಕ್ಕೆ ಪಾಲೆಕೊಂಬು ಮೆರವಣಿಗೆ ಆಗಮನ, ದೀಪಾರಾಧನೆ, ೧೦.೩೦ರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ೧೭ರಂದು ರಾತ್ರಿ ೧೨ ಗಂಟೆಗೆ ವಿವಿಧ ಕಾರ್ಯಕ್ರಮಗಳು, ಮುಂಜಾನೆ ೪ಕ್ಕೆ ಅಯ್ಯಪ್ಪನ್ ವಾವರ ಯುದ್ಧ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page