ಬಾವಿಗೆ ಬಿದ್ದ ಆಡನ್ನು ಸಾಹಸಿಕವಾಗಿ ಉಪ್ಪಳ ಅಗ್ನಿಶಾಮಕ ದಳದಿಂದ ರಕ್ಷಣೆ
ಉಪ್ಪಳ: ಉಪಯೋಗಶೂನ್ಯ ಗೊಂಡ ಬಾವಿಗೆ ಬಿದ್ದ ಆಡನ್ನು ಉಪ್ಪಳ ಅಗ್ನಿಶಾಮಕ ದಳ ಸಿಬ್ಬಂದಿ ಸಾಹಸಿಕ ವಾಗಿ ರಕ್ಷಿಸಿದ ಘಟನೆ ಬಂದ್ಯೋಡು ಬಳಿಯಲ್ಲಿ ನಡೆದಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಬಂದ್ಯೋಡು ಬಳಿಯ ಮುಟ್ಟಂ ಪೆಟ್ರೋಲ್ ಪಂಪ್ ಸಮೀಪದ ಹನೀಫ ಅಡ್ಕ ಎಂಬವರ ಹಿತ್ತಿಲಿನಲ್ಲಿರುವ ಉಪಯೋಗಶೂನ್ಯ ಬಾವಿಗೆ ನಿನ್ನೆ ಸಂಜೆ ಪರಿಸರದ ಸೌದ ಮೊಹಮ್ಮದ್ ಎಂಬವರ ಆಡು ಬಿದ್ದಿದೆ. ಆವರಣಗೋಡೆ ಇರುವ ಈ ಬಾವಿ ೧೬ ಕೋಲು ಆಳವಿದ್ದು, ಎರಡು ಕೋಲು ನೀರು ತುಂಬಿಕೊಂಡಿದೆ. ತ್ಯಾಜ್ಯ ತುಂಬಿ ಬಾವಿಗೆ ಇಳಿಯಲಾಗದ ಸ್ಥಿತಿಯಲ್ಲಿತ್ತು. ಆಡು ಬಾವಿಯಲ್ಲಿರುವ ಮಾಟೆಯೊಳಗೆ ಸಿಲುಕಿತ್ತು. ಉಪ್ಪಳ ಅಗ್ನಿ ಶಾಮಕದಳದ ಮುರಳೀಧರನ್ ಟಿ.ಎಸ್. ಉಪಕರಣ ಸಹಾಯದಿಂದ ಅತೀ ಸಾಹಸಿಕ ರೀತಿಯಲ್ಲಿ ಬಾವಿಗೆ ಇಳಿದು ಆಡನ್ನು ಮೇಲಕ್ಕೆ ತೆಗೆದು ರಕ್ಷಿಸಿ ದ್ದಾರೆ. ಇವರ ಈ ಸಾಹಸವನ್ನು ಊರ ವರು ಅಭಿ ನಂದಿಸಿದ್ದಾರೆ. ಅಗ್ನಿ ಶಾಮಕ ದಳದ ಅಧಿ ಕಾರಿ ಸುನಿಲ್, ಸಿಬ್ಬಂದಿಗ ಳಾದ ಸಂದೀಪ್, ಪದ್ಮಕುಮಾರ್, ವಿಬಿನ್ ಉಪಸ್ಥಿತರಿದ್ದರು.