ಬಿ.ಎಂ.ಎಸ್ ಕಾರ್ಯಕರ್ತ ಜ್ಯೋತಿಷ್ರನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಆರೋಪಿಗಳಾದ ಎಸ್ಡಿಪಿಐ ಕಾರ್ಯಕರ್ತರ ಖುಲಾಸೆ
ಕಾಸರಗೋಡು: ಬಿಎಂಎಸ್ ಕಾರ್ಯಕರ್ತನಾಗಿದ್ದ ಅಣಂಗೂರು ಜೆಪಿ ಕಾಲನಿಯ ಜ್ಯೋತಿಷ್ರನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಗಳಾಗಿರುವ ಎಸ್ಡಿಪಿಐ ಕಾರ್ಯಕರ್ತರ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಅವರನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಎಸ್ಡಿಪಿಐ ಕಾರ್ಯಕರ್ತರಾದ ರಫೀಕ್ ಅಣಂಗೂರು, ಹಮೀದ್ ಕಡಪ್ಪುರಂ, ಸಾಬೀರ್ ಚೇರಂಗೈ ಮತ್ತು ಅಶ್ರಫ್ ಅಣಂಗೂರು ಎಂಬವರು ಈ ಪ್ರಕರಣದ ಆರೋಪಿಗಳಾಗಿದ್ದು, ಅವರ ಮೇಲಿನ ಆರೋಪ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
2017 ಅಗೋಸ್ತ್ 10ರಂದು ಜ್ಯೋತಿಷ್ ಬೈಕ್ನಲ್ಲಿ ಅಣಂಗೂರಿ ನಿಂದ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಅವರನ್ನು ಹಿಂಬಾಲಿಸಿಕೊAಡು ಹೋದ ಅಕ್ರಮಿಗಳ ತಂಡ ಮಾರಕಾಯುಧಗಳೊಂದಿಗೆ ಎರಗಿ ಅವರನ್ನು ಕಡಿದು ಕೊಲೆಗೈಯ್ಯ ಲೆತ್ನಿಸಿತ್ತು. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿದ್ದರು. ಆದರೆ ವಿಚಾರಣೆಯಲ್ಲಿ ಆರೋಪ ಸಾಬೀತುಗೊಳ್ಳದ ಹಿನ್ನೆಲೆ ಯಲ್ಲಿ ನ್ಯಾಯಾಲಯ ಆರೋಪಿಗಳನ್ನು ಕೊನೆಗೆ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಜ್ಯೋತಿಷ್ 2022 ಫೆಬ್ರವರಿ 15ರಂದು ಅವರ ಮನೆ ಬಳಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.