ಬೆಳ್ಳೂರು ಲಕ್ಷದೀಪೋತ್ಸವ ಎಳ್ಳೆಣ್ಣೆ ಸಮರ್ಪಣಾ ಯಜ್ಞ ನಾಳೆ

ಬೆಳ್ಳೂರು: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಈ ತಿಂಗಳ ೨೨ರಂದು ನಡೆಯಲಿರು ವಂತೆ ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ನಾಳೆ ಬೆಳಿಗ್ಗೆ ೧೧ ಗಂಟೆಗೆ ಬೆಳ್ಳೂರು ಕ್ಷೇತ್ರದಲ್ಲಿ ಎಳ್ಳೆಣ್ಣೆ ಸಮರ್ಪಣಾ ಯಜ್ಞ ಆರಂಭಗೊಳ್ಳಲಿದೆ. ಭಕ್ತರಿಗೆ ೨೨ರವರೆಗೆ ಎಳ್ಳೆಣ್ಣೆ ಸಮರ್ಪಿಸಬಹುದೆಂದು, ಎಳ್ಳೆಣ್ಣೆ ದೇವಸ್ಥಾನದಲ್ಲೇ ಲಭ್ಯವಿದ್ದು,  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಸಂಬಂಧಪಟ್ಟವರು ತಿಳಿಸಿದ್ದಾರೆ.

You cannot copy contents of this page