ಬೈಕ್-ಕಾರು ಢಿಕ್ಕಿ: ವ್ಯಾಪಾರಿಗೆ ಗಾಯ

ನೀರ್ಚಾಲು: ನೀರ್ಚಾಲು ಮೇಲಿ ನ ಪೇಟೆಯಲ್ಲಿ ನಿನ್ನೆ ಅಪರಾಹ್ನ ಸಂಭವಿಸಿದ ವಾಹನ ಅಪಘಾತದಲ್ಲಿ ವ್ಯಾಪಾರಿಯೊಬ್ಬರು ಗಾಯಗೊಂ ಡಿದ್ದಾರೆ.

ಮಾನ್ಯ ನಿವಾಸಿ ಅಚ್ಯುತ ಮಣಿಯಾಣಿಯವರ ಪುತ್ರ ಮಾನ್ಯ ದಲ್ಲಿ ವ್ಯಾಪಾರಿಯಾಗಿರುವ ಮಧು (45) ಎಂಬವರು ಗಾಯಗೊಂ ಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಧು ಸಂಚರಿಸುತ್ತಿದ್ದ ಬೈಕ್‌ಗೆ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮಧು ನೀರ್ಚಾಲ್ ನಿಂದ ಮಾನ್ಯದತ್ತ ತೆರಳುತ್ತಿದ್ದಾಗ ಕುಂಬಳೆಯಿಂದ ಬದಿಯಡ್ಕ ಭಾಗಕ್ಕೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ.

RELATED NEWS

You cannot copy contents of this page