ಮಜಿಬೈಲ್ ತಿರುವಿನಲ್ಲಿ ಆವರಿಸಿದ ಕಾಡುಪೊದೆಗಳು: ಅಪಘಾತ ಭೀತಿ

ಮಂಜೇಶ್ವರ: ಮೀಂಜ ಪಂಚಾಯತ್ ವ್ಯಾಪ್ತಿಯ ಮೀಯಪದವು ರಸ್ತೆಯ ಮಜಿಬೈಲು ಸೇತುವೆ ಸಮೀಪದ ತಿರುವಿನಲ್ಲಿ ಕಾಡುಪೊದೆಗಳು ಆವರಿಸಿಕೊಂಡಿದ್ದು, ವಾಹನ ಸವಾರರಲ್ಲಿ ಅಪಘಾತದ ಭೀತಿ ಉಂಟುಮÁಡಿದೆ. ಈ ರಸ್ತೆ ಉದ್ದಕ್ಕೂ ಅಲ್ಲಲ್ಲಿ ತಿರುವುಗಳು ಇದ್ದು ಇಕ್ಕೆಡೆಗಳಲ್ಲಿ ಕಾಡುಪೊದೆಗಳು ತುಂಬಿಕೊAಡಿದೆ. ಆದರೆ ಸೇತುವೆ ಸಮೀಪದಲ್ಲಿ ದೊಡ್ಡ ತಿರುವುಯಿದ್ದು ಪೊದೆಗಳು ಆವರಿಸಿದ ಕಾರಣ ಮೀಯಪದವು ಭಾಗದಿಂದ ಹೊಸಂಗಡಿಗೂ ಹೊಸಂಗಡಿ ಭಾಗದಿಂದ ಮೀಯಪದವುಗೆ ತೆರಳುವ ವಾಹನ ಸವಾರರ ಗಮನಕ್ಕೆ ಬಾರ ದಿರುವುದು ಅಪಘಾತಕ್ಕೆ ಸಾಧ್ಯತೆ ಹೆಚ್ಚಾಗುತ್ತಿರುವುದಾಗಿ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಸಂಬAಧಪಟ್ಟ ಪಂಚಾಯತ್ ಅಥವಾ ಸಂಘ ಸಂಸ್ಥೆಗಳು ರಸ್ತೆಯ ಬದಿಯಲ್ಲಿ ತುಂಬಿಕೊAಡಿರುವ ಕಾಡುಪೊದೆಗಳನ್ನು ಕಡಿದು ತೆರವುಗೊಳಿಸಿ ಶುಚೀಕರಣಗೊಳಿಸಿ ಸಂಭವಿಸ ಬಹುದಾದ ಅಪಾಯವನ್ನು ತಪ್ಪಿಸಬೆÃಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page