ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರ ಭೂತಬಲಿ ಉತ್ಸವ ನಾಳೆಯಿಂದ

ಮುಳ್ಳೇರಿಯ: ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಶ್ರೀ ಭೂತಬಲಿ ಉತ್ಸವ ಈ ತಿಂಗಳ ೩೧ರಿಂದ ಎಪ್ರಿಲ್ ೪ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

೩೧ರಂದು ಬೆಳಿಗ್ಗೆ ೧೧ ಗಂಟೆಗೆ ಆನೆ ಚಪ್ಪರ ಏರಿಸುವುದು, ರಾತ್ರಿ ೭.೩೦ಕ್ಕೆ ಉಗ್ರಾಣ ತುಂಬಿಸುವುದು, ಎ.೧ರಂದು ಬೆಳಿಗ್ಗೆ ೭.೩೦ರಿಂದ ಗಣಪತಿ ಹೋಮ, ನವಕಾಭಿಷೇಕ, ೯.೩೦ರಿಂದ ಸಂಗೀತ ಸೌರಭ, ೧೧ರಿಂದ ತುಲಾಭಾರ ಸೇವೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೩.೩೦ಕ್ಕೆ ತಂಬಿಲ, ರಾತ್ರಿ ೭ಕ್ಕೆ ಚಳ್ಳಂಗೋಡು ದೈವಸ್ಥಾನದಿಂದ ಗ್ರಾಮಾಧಿ ದೈವಗಳ ಭಂಡಾರ ಆಗಮನ, ಭಜನೆ, ೮ಕ್ಕೆ ರಂಗಪೂಜೆ, ೮.೩೦ರಿಂದ ಅನ್ನ ಸಂತರ್ಪಣೆ, ೯ರಿಂದ ಶ್ರೀ ದೇವರ ಭೂತಬಲಿ, ನೃತ್ಯ, ಬೆಡಿ ಸೇವೆ, ೨ರಂದು ಬೆಳಿಗ್ಗೆ ೭.೩೦ಕ್ಕೆ ಉಷಃಪೂಜೆ, ೯ರಿಂದ ಭಜನೆ, ೧೦.೩೦ಕ್ಕೆ ಶ್ರೀ ದೇವರ ಭೂತಬಲಿ, ಭಗವತೀ ಸಂದರ್ಶನ, ರಾಜಾಂಗಣ ಪ್ರಸಾದ, ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ ೩ರಿಂದ ಗ್ರಾಮಧಿ ದೈವಗಳ ಆರಾಧನೆ, ರಾತ್ರಿ ೭ಕ್ಕೆ ನೃತ್ಯ ವೈವಿಧ್ಯ, ೧೦ರಿಂದ ಯಕ್ಷಗಾನ ಬಯಲಾಟ, ‘ಕೀಲಕಾಸುರ ವಧೆ- ಅಗ್ರಪೂಜೆ’ ಪ್ರದರ್ಶನಗೊಳ್ಳಲಿದೆ. ೩ರಂದು ಸಂಜೆ ೭ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ರಾತ್ರಿ ೭.೩೦ಕ್ಕೆ ದೈವಗಳ ಆರಂಭ, ನೃತ್ಯ ಸಿಂಚನ, ೧೨.೩೦ಕ್ಕೆ ಉಬಾರ್ ಗಯಾ ಪದ ಕಲಾವಿದರಿಂದ ‘ಮುರಳಿ ಈ ಪಿರ ಬರೊಲಿ’ ನಾಟಕ ಪ್ರದರ್ಶನ ಗೊಳ್ಳಲಿದೆ. ೪ರಂದು ಮುಂಜಾನೆ ೪ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಬಯಲುಕೋಲ ನಡೆದು ಭಂಡಾರ ನಿರ್ಗಮನವಾಗಲಿದೆ.

Leave a Reply

Your email address will not be published. Required fields are marked *

You cannot copy content of this page