ಮಾತೆಯರ ಕುಣಿತ ಭಜನೆಯೊಂದಿಗೆ ಮಧೂರು ಕ್ಷೇತ್ರಕ್ಕೆ ಹೊರೆಕಾಣಿಕೆ ಶೋಭಾಯಾತ್ರೆ 26ರಂದು

ಮಧೂರು: ಪ್ರಸಿದ್ಧ ಶ್ರೀ ಮಧೂರು ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ನಾಡು ನಗರ ಸಜ್ಜುವಾಗುತ್ತಿದೆ. ಊರ, ಪರವೂರ, ಹೊರರಾಜ್ಯ, ಹೊರನಾಡ ಪ್ರಜ್ಞಾವಂತ ಭಕ್ತರು ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಶ್ವರ, ಗಣೇಶರ ಜೊತೆ ಯಲ್ಲಿ ಉಪದೇವತೆಗಳಾದ ದುರ್ಗಾ ಪರಮೇಶ್ವರಿ, ಅಯ್ಯಪ್ಪ, ಸುಬ್ರಹ್ಮಣ್ಯರು ಇಲ್ಲಿ ಭಕ್ತರನ್ನು ಹರಸುತ್ತಿದ್ದಾರೆ. ತುಳುನಾಡಿನ ಆರು ಪ್ರಮುಖ ಗಣಪತಿ ದೇವಸ್ಥಾನಗಳಲ್ಲಿ ಒಂದಾಗಿರುವ ನಮ್ಮ ಮಧೂರು ಕ್ಷೇತ್ರದ ಬ್ರಹ್ಮಕಲಶೋತ್ಸವ ಈ ತಿಂಗಳ ೨೭ರಿಂದ ಪ್ರಾರಂಭವಾಗ ಲಿದೆ. ಇದರ ಪೂರ್ವಭಾವಿಯಾಗಿ 26ರಂದು ಅಪರಾಹ್ನ 2 ಗಂಟೆಗೆ ಹೊರಡಲಿರುವ ಹೊರೆಕಾಣಿಕೆ ಉಳಿಯತ್ತಡ್ಕ ಮೂಲಸ್ಥಾನದಿಂದ ಆರಂಭವಾಗಲಿದೆ. ಸುಮಾರು ಸಾವಿರಾರು ಮಹಿಳೆಯರು ಭಾಗವಹಿಸುವ ಕುಣಿತ ಭಜನೆ ಮೂಲಕ ಶೋಭಾಯಾತ್ರೆ ಮಧೂರಿಗೆ ತಲುಪಲಿದೆ. ಸಮವಸ್ತ್ರದಲ್ಲಿ ಕಂಗೋಳಿಸುವ ಮಹಿಳೆಯರು ಹಿಂದೂ ಸಂಸ್ಕೃತಿಯ ಉಡುಗೆಯ ಜೊತೆಗೆ ತಾಳವನ್ನು ಹಿಡಿದು ಕುಣಿತ ಭಜನೆ ಮೂಲಕ ಕ್ಷೇತ್ರವನ್ನು ತಲುಪಲಿದ್ದಾರೆ.

ಮೊಗೇರ ಸಮಾಜದವರಿಂದ ನಿಧಿ ಸಮರ್ಪಣೆ ನಾಳೆ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನವೀಕರಣ ಕೆಲಸಗಳಿಗಾಗಿ  ಸಮಸ್ತ ಮೊಗೇರ ಸಮಾಜದವರಿಂದ ನಿಧಿ ಸಮರ್ಪಣೆ ನಾಳೆ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಇದೇ ವೇಳೆ 1986ರಲ್ಲಿ ಸಮಾಜದ ಹಿರಿಯರು ಕೊಡುಗೆಯಾಗಿ ನೀಡಿದ ಜೋಡು ದೀಪಗಳನ್ನು ಶುಚಿಗೊಳಿಸಿ ಮರು ಸ್ಥಾಪಿ ಸುವ ಕಾರ್ಯ ನಡೆಯಲಿದೆ. ಕಾರ್ಯ ಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೊಗೇರ ಬಾಂಧವರು ಭಾಗವಹಿಸಬೇಕೆಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page