ಮಾಪಿಳಪ್ಪಾಟು ಕಲಾವಿದ ನಿಧನ
ಹೊಸದುರ್ಗ: ಗಾಯಕ ಹಾಗೂ ಮಾಪಿಳಪ್ಪಾಟು ಕಲಾವಿದ ಕಾಞಂಗಾಡ್ ನಿವಾಸಿ ಎಂ.ಕೆ. ಮನ್ಸೂರ್ (44) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆಯಲ್ಲಿ 20 ದಿನದ ಹಿಂದೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಸ್ಥಳೀಯ ಕಲೆ- ಸಾಮಾಜಿಕ ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯರಾಗಿದ್ದರು. ಮಾಪಿಳ ಕಲಾವಿದರ ಸಂಘಟನೆಯಾದ ಉಮ್ಮಾಸ್ನ ಕಾರ್ಯದರ್ಶಿಯಾಗಿದ್ದಾರೆ.
ಮೃತರು ತಾಯಿ ಖದೀಜ, ಸಹೋದರಿಯರಾದ ನಸೀಮ, ಖೈರುನ್ನೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಂದೆ ವಡಕ್ಕರಮುಖ್ ಆವಿಕ್ಕೆರೆ ನಿವಾಸಿ ಹಸೈನಾರ್ ಈ ಹಿಂದೆ ನಿಧನ ಹೊಂದಿದ್ದಾರೆ.