ಮುಳಿಯಾರು ಎಬಿಸಿ ಕೇಂದ್ರ ಬೇಳ ಅಡ್ಮಿನಿಸ್ಟ್ರೇಟಿವ್ ಕಟ್ಟಡ ಉದ್ಘಾಟನೆ 19ರಂದು
ಕಾಸರಗೋಡು: ಮೃಗ ಸಂರಕ್ಷಣಾ ಇಲಾಖೆ, ತ್ರಿಸ್ತರ ಪಂಚಾಯತ್ಗಳು ಜಂಟಿಯಾಗಿ ಜ್ಯಾರಿಗೊಳಿಸುವ ಎಬಿಸಿ ಕೇಂದ್ರ ಮುಳಿಯಾರಿನಲ್ಲಿ ಚಟುವಟಿಕೆ ಆರಂಭಿಸಲಿದೆ. ಈ ಕೇಂದ್ರವನ್ನು ಈತಿಂಗಳ 19ರಂದು ಹೈನುಗಾರಿಕೆ ಇಲಾಖೆ ಸಚಿವೆ ಜೆ. ಚಿಂಜುರಾಣಿ ಉದ್ಘಾಟಿಸುವರು. ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ನಿಯಂತ್ರಿಸಲು ಎಬಿಸಿ ಕೇಂದ್ರಗಳ ಚಟುವಟಿಕೆ ಇನ್ನಷ್ಟು ಚುರುಕುಗೊಳಿಸಲು ತೀರ್ಮಾನಿ ಸಲಾಗಿದೆ.
2016ರಲ್ಲಿ ಜಿಲ್ಲೆಯಲ್ಲಿ ಎಬಿಸಿ ಕೇಂದ್ರಗಳು ಜಾರಿಗೆ ಬಂದಿತ್ತು. 19ರಂದು ಅಪರಾಹ 3 ಗಂಟೆಗೆ ಉದ್ಘಾಟನೆ ನಡೆಯಲಿದೆ. ಅಂದು ಜಿಲ್ಲೆಗೆ ತಲುಪುವ ಸಚಿವೆ ಚಿಂಜುರಾಣಿ ಬೆಳಿಗ್ಗೆ 10ಕ್ಕೆ ಇಡಯಿಲಕ್ಕಾಡ್ ಕ್ಷೀರ ಸಂಗಮ, ಕಟ್ಟಡ ಉದ್ಘಾಟನೆ ನೆರವೇರಿಸುವರು. ಮಧ್ಯಾಹ್ನ ನೀಲೇಶ್ವರ ಎಲ್ಎಂಟಿಸಿ ಕಟ್ಟಡ, 2ಗಂಟೆಗೆ ಬೇಡಗಂ ಆಡು ಫಾರ್ಮ್ಗಳಿಗೆ ಭೇಟಿ ನೀಡುವರು. ಸಂಜೆ ೪ಕ್ಕೆ ಬದಿಯಡ್ಕ ಬೇಳ ಜಾನುವಾರು ಸಾಕಣೆ ಫಾರ್ಮ್ನಲ್ಲಿ ಅಡ್ಮಿನಿಸ್ಟ್ರೇಟಿವ್ ಕಟ್ಟಡ ಉದ್ಘಾಟಿಸುವರು.