ರಾಜ್ಯದಲ್ಲಿ ಆಯುಷ್ಮಾನ್ ಯೋಜನೆ ನೇರ ಜ್ಯಾರಿಗೆ ಬಿಜೆಪಿ ಕೇಂದ್ರಕ್ಕೆ ಮನವಿ

ಹೊಸಂಗಡಿ: ಕೇಂದ್ರದ ಆಯುಷ್ಮಾನ್ ಯೋಜನೆಯನ್ನು ರಾಜ್ಯ ಜನರಿಗೆ ನೇರವಾಗಿ ಲಭಿಸುವಂತೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದೆ. ದೇಶದ ಇತರ ರಾಜ್ಯಗಳಲ್ಲಿನ ಬಡ ಜನರಿಗೆ ಈ ಯೋಜನೆಯ ಸೌಲಭ್ಯ ಲಭಿಸುತ್ತಿರುವಾಗ ಕೇರಳದಲ್ಲಿನ ಸರಕಾರ ಆಯುಷ್ಮಾನ್ ಯೋಜನೆಯನ್ನು ರಾಜ್ಯದಲ್ಲಿ ಜ್ಯಾರಿಗೊಳಿಸದೆ ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ದೂರಿದೆ. ರೇಶನ್‌ಕಾರ್ಡ್ ಮೂಲಕ ಇತರ ರಾಜ್ಯಗಳಲ್ಲಿ ಫಲಾನುಭವಿಗ ಳಾಗಲು ಸಾಧ್ಯತೆ ಇದ್ದು, ಆದರೆ ರಾಜ್ಯದಲ್ಲಿ ಸರಕಾರ ಇನ್ನೂ ಅಂಗೀಕಾರ ನೀಡಿಲ್ಲ. ಇದರ ಹೆಸರು ಬದಲಿಸಿ ಜನರಿಗೆ, ರೋಗಿಗಳಿಗೆ ಸಿಗಬೇಕಾದ ಸವಲತ್ತುಗಳಿಗೆ ಅಡ್ಡಗಾಲು ಹಾಕುತ್ತಿದೆ ಎಂದು ಮಂಡಲ ಸಮಿತಿ ಅಧ್ಯಕ್ಷ ಆದರ್ಶ್ ಬಿ.ಎಂ. ಆರೋಪಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಜನರಿಗೆ ನೇರವಾಗಿ ಯೋಜನೆಯಲ್ಲಿ ಸೇರುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ಯಾದವ ಬಡಾಜೆ, ಹರಿಶ್ಚಂದ್ರ ಧೂಮಪ್ಪ ಶೆಟ್ಟಿ, ಮಣಿಕಂಠ ರೈ, ಪದ್ಮನಾಭ ರೈ, ಕೆ.ವಿ. ಭಟ್, ಎ.ಕೆ. ಕಯ್ಯಾರ್, ಸುಬ್ರಹ್ಮಣ್ಯ ಭಟ್, ಸುಪ್ರಿಯಾ ಶೆಣೈ, ವಿನಯ ಭಾಸ್ಕರ್, ರಕ್ಷಣ್ ಅಡೆಕ್ಕಳ, ಆಶಾಲತಾ, ಬಿ.ಎಂ., ಯತಿರಾಜ್ ಶೆಟ್ಟಿ, ಚಂದ್ರಹಾಸ ಕಡಂಬಾರ್ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page