ರಾಜ್ಯ ಸರಕಾರ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ಅನಿವಾರ್ಯ- ಎನ್.ಜಿ.ಒ. ಸಂಘ್
ಕಾಸರಗೋಡು: ರಾಜ್ಯದ ಸರಕಾರಿ ನೌಕರರ ಬಗ್ಗೆ ಎಡರಂಗ ಸರಕಾರ ಹೊಂದಿರುವ ನೀತಿ ವಿರುದ್ಧ ಅನಿರ್ದಿಷ್ಟಕಾಲ ಕೆಲಸ ಸ್ಥಗಿತ ಮುಷ್ಕರ ಅನಿವಾರ್ಯವೆಂದು ಎನ್ಜಿಒ ಸಂಘ್ ರಾಜ್ಯ ಕಾರ್ಯದರ್ಶಿ ಕೆ. ಗೋಪಾಲಕೃಷ್ಣನ್ ಅಭಿಪ್ರಾಯಪಟ್ಟರು. ಕೇರಳ ಎನ್ಜಿಒ ಸಂಘ್ ೪೦ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ನೌಕರರ ವೇತನ ಹೊರತುಪಡಿಸಿ ಉಳಿದ ಎಲ್ಲಾ ಸೌಲಭ್ಯಗಳನ್ನು ಇಂದು ರಾಜ್ಯಾಡಳಿತ ನಡೆಸುತ್ತಿರುವ ಎಡರಂಗ ಸರಕಾರ ಕಸಿದುಕೊಂಡಿದೆ. ಸಹಭಾಗಿತ್ವ ಪಿಂಚಣಿಯನ್ನು ಹಿಂತೆಗೆಯಲಿಲ್ಲ. ಮಾತ್ರವಲ್ಲದೆ ಇದನ್ನು ಇನ್ನಿತರ ವಲಯಗಳಿಗೂ ವಿಸ್ತರಿಸಿದೆ. 7 ಕಂತು ಕ್ಷಾಮಭತ್ತೆ ಬಾಕಿ ಉಳಿದಿರುವ ಸಂ ದರ್ಭದಲ್ಲಿ ಒಂದು ಕಂತನ್ನು ಮಾತ್ರವೇ ಮಂಜೂರು ಮಾಡಿದೆ. ಈ ರೀತಿ ಹಲವಾರು ಕಾರ್ಮಿಕ ವಿರುದ್ಧ ಕ್ರಮಗಳಿದ್ದರೂ ಎಡ ಸಂಘಟನೆಗಳು ಈಗಲೂ ಸರಕಾರಕ್ಕೆ ಒತ್ತಾಸೆ ನಡೆಸುತ್ತಿ ರುವುದಾಗಿ ಅವರು ಆರೋಪಿಸಿದರು.
ಇದರ ವಿರುದ್ಧ ಸಂಯುಕ್ತ ಕೆಲಸ ಸ್ಥಗಿತ ಮುಷ್ಕರಕ್ಕೆ ಕೇರಳ ಎನ್ಜಿಒ ಸಂಘ್ ನೇತೃತ್ವ ನೀಡಲಿದೆ ಎಂದು ಅವರು ತಿಳಿಸಿದರು. ಎನ್ಜಿಒ ಸಂಘ್ ಜಿಲ್ಲಾಧ್ಯಕ್ಷ ಕೆ. ರಂಜಿತ್ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯ ದರ್ಶಿ ಕೆ.ವಿ. ಬಾಬು, ರಾಜೇಂದ್ರ ಕೆ, ಕುಂಞಿರಾಮನ್ ಕೇಳೋತ್, ಪುರುಷೋತ್ತಮನ್ ಕೆ.ವಿ, ಕೃಷ್ಣನ್ ಟಿ, ಜಯಕುಮಾರ್ ಎಂ. ಶುಭ ಕೋರಿದರು. ಜಿಲ್ಲಾ ಕಾರ್ಯದರ್ಶಿ ವಿ. ಶ್ಯಾಮ್ ಪ್ರಸಾದ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ರಂಜೀವ್ ರಾಘವನ್ ವಂದಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾಗಿ ಕೆ. ರಂಜಿತ್, ಕಾರ್ಯದರ್ಶಿಯಾಗಿ ಪಿ.ಸಿ. ಸುನಿಲ್, ಕೋಶಾಧಿಕಾರಿಯಾಗಿ ಕೆ. ರವಿಕುಮಾರ್ ಆಯ್ಕೆಯಾದರು.