ರೈಲಿನಲ್ಲಿ ತೆರಳಿದ ವ್ಯಕ್ತಿ ಹಿಂತಿರುಗಿಲ್ಲ ದೂರು ದಾಖಲು
ಕಾಸರಗೋಡು: ನೋರ್ತ್ ತೃಕರಿಪುರ್, ಪೂಚೋಲ್ ನಿವಾಸಿ ಸುರೇಶ್ (59) ನಾಪತ್ತೆಯಾ ಗಿರುವುದಾಗಿ ದೂರಲಾಗಿದೆ. ಸಹೋದರಿ ಪಿ.ವಿ. ಶೀಜಾ ನೀಡಿದ ದೂರಿನಂತೆ ಚಂದೇರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿ ಸಿದರು. ಈ ತಿಂಗಳ 20ರಂದು ಬೆಳಿಗ್ಗೆ 7 ಗಂಟೆಗೆ ತೃಕರಿಪುರ ರೈಲು ನಿಲ್ದಾಣಕ್ಕೆ ತಲುಪಿ ರೈಲುಗಾಡಿ ಹತ್ತಿ ತೆರಳಿರುವುದಾಗಿ ಶೀಬಾ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ದಿನಗಳು ಹಲವು ಕಳೆದರೂ ಹಿಂತಿರುಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.