ರೋಟರಿ ಕಾಸರಗೋಡು ಮೊಬೈಲ್ ಬ್ಲಡ್ ಬ್ಯಾಂಕ್ ವ್ಯಾನ್ ಲೋಕಾರ್ಪಣೆ
ಕಾಸರಗೋಡು: ಆರೋಗ್ಯ ರಂಗದಲ್ಲಿ ಹೊಸ ಬದಲಾವಣೆಗಳಿಗೆ ನಾಂದಿ ಹಾಡುವ ಮೂಲಕ ಕಾಸರಗೋಡು ರೋಟರಿ ಕ್ಲಬ್ ಆಯೋಜಿಸಿದ್ದ ಸಂಚಾರಿ ರಕ್ತ ನಿಧಿ ವ್ಯಾನ್ ಅನ್ನು ರೋಟರಿ ಕ್ಲಬ್ ಆಶ್ರಯದಲ್ಲಿ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ಹಸ್ತಾಂತರಿ ಸಲಾಯಿತು. ನಿ£್ನೆ ಬೆಳಿಗ್ಗೆ ನಡೆದ ಸಮಾರಂಭದ ಉದ್ಘಾಟನೆಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ನೆರವೇರಿಸಿದರು. ಸಂಚಾರಿ ರಕ್ತ ಬ್ಯಾಂಕ್ ವಾಹನದ ಕೀ ಯನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಆಧೀಕ್ಷಕ ರೋಟರಿಯನ್ ಡಾ. ಜನಾರ್ದನ ನಾಯ್ಕ್ ಅವರು ರೋಟರಿ ಜಿಲ್ಲಾ ಗವರ್ನರ್ ರೋಟರಿಯನ್ ಡಾ. ಸಂತೋಷ್ ಶ್ರೀಧರ್ರಿಂದ ಪಡೆದುಕೊಂಡರು. ರೋಟರಿ ಕಾಸರಗೋಡು ಅಧ್ಯಕ್ಷ ರೋಟರಿಯನ್ ಎಂಡಿ ಡಾ| ಬಿ.ನಾರಾಯಣ ನಾಯ್ಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರೋಟರಿಯನ್ ಪಿಎಚ್ಎಫ್ ಗೋಕುಲ್ ಚಂದ್ರಬಾಬು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ರೋಟರಿಯನ್ ಎಂಡಿ ಡಾ| ಸಂತೋಷ್ ಶ್ರೀಧರ್ ಭಾಷಣ ಮಾಡಿದರು. ಉದುಮ ಕ್ಷೇತ್ರ ದ ಶಾಸಕ ಸಿ.ಎಚ್. ಕುಂಞAಬು ಗೌರವ ಅತಿಥಿಯಾಗಿದ್ದರು. ನಗರಸಭೆಯ ಅಧ್ಯಕ್ಷ ಅಬ್ಬಾಸ್ ಬೀಗಂ ರವರು ಮುಖ್ಯ ಭಾಷಣ ಮಾಡಿದರು.
ಸಮಾರಂಭದಲ್ಲಿ ನಗರಸಭೆಯ ಆರೋಗ್ಯ ಸ್ಥಾಯೀಸಮಿತಿಯ ಅಧ್ಯಕ್ಷ ಖಾಲಿದ್ ಪಚೆಕಾಡು, ವಾರ್ಡ ಸದಸ್ಯೆ ಶ್ರೀಮತಿ ಶ್ರೀಲತಾ, ಮತ್ತು ಡಾ.ಶಾಂತಿ ಕೆ.ಕೆ, ಪಿಡಿಜಿ ರೋಟರಿಯನ್ ಡಾ.ಹರಿಕೃಷ್ಣನ್ ನಂಬಿಯಾರ್, ರೋಟರಿಯನ್ ರಾಧಾಕೃಷ್ಣನ್ ಎಂ.ಕೆ, ರೋಟರಿಯನ್ ವಿ.ವಿ, ರೋಟರಿಯನ್ ಡಾ| ಜನಾರ್ದನ ನಾಯ್ಕ್ ಸಿ.ಎಚ್, ರೋಟರಿಯನ್ ಡಾ| ಜ್ಯೋತಿ ಎಸ್, ಡಾ| ಜಮಾಲ್ ಅಹಮದ್ ಡಾ| ಶೆರಿನಾ ಪಿ.ಎ. ರೋಟರಿಯನ್ ಎಂ.ಟಿ. ದಿನೇಶನ್ ಮತ್ತು ಇತರರು ಭಾಗವಹಿಸಿದರು. ರೋಟರಿಯನ್ ಹರಿಪ್ರಸಾದ್ ಕೆ ಧನ್ಯವಾದ ಅರ್ಪಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ ರಕ್ತದಾನ ಚಟುವಟಿಕೆಗಳಲ್ಲಿ ಇದು ಒಂದು ಪ್ರಮುಖ ಪ್ರಗತಿಯಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.