ವಾಂದಿ-ಭೇದಿ: ಹಲವು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ದಾಖಲು

ಕಾಸರಗೋಡು:  ಆಹಾರ ಸೇವಿಸಿದ ಬಳಿಕ ವಾಂತಿ ಭೇದಿ ಅನುಭವಗೊಂಡ ಕುಂಡಂಕುಳಿ ಸಾವಿತ್ರಿಭಾಯಿ ಫುಲೆ ಸರಕಾರಿ ಆಶ್ರಮ ಶಾಲೆಯ ಹಲವು ವಿದ್ಯಾರ್ಥಿಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.

ಇದರಲ್ಲಿ ೨೧ ಮಂದಿ ವಿದ್ಯಾರ್ಥಿಗಳನ್ನು ಬೇಡಡ್ಕ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಳಿಕ ಇವರಲ್ಲಿ ೯ ಮಂದಿಯನ್ನು ನಿನ್ನೆ ಅಪರಾಹ್ನ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸಿ ಅಲ್ಲಿ ದಾಖಲಿಸಲಾಗಿದೆ.  ಇದರ ಹೊರತಾಗಿ ಕಳೆದ ನಾಲ್ಕು ದಿನಗಳಲ್ಲಾಗಿ ಹಲವು ವಿದ್ಯಾರ್ಥಿಗಳು ಬೇಡಡ್ಕ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಆ ಮೂಲಕ ಚಿಕಿತ್ಸೆ ಪಡೆದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ೪೨ಕ್ಕೇರಿದೆ. ಹೀಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಲ್ಲಿ ೧೬ ಮಂದಿ ಹೆಣ್ಮಕ್ಕಳಾಗಿದ್ದಾರೆ. ಈ ಶಾಲೆಯಲ್ಲಿ ೧ನೇ ತರಗತಿಯಿಂದ ಆರಂಭಗೊಂಡು ೭ನೇ ತರಗತಿ ತನಕ ಒಟ್ಟು ೨೦೧ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರೆಲ್ಲಾ ಜಿಲ್ಲೆಯ ವಿವಿಧ ಪ್ರದೇಶಗಳ ನಿವಾಸಿಗಳಾ ಗಿದ್ದಾರೆ. ಇವರೆಲ್ಲಾ  ಶಾಲೆಯ ಆಶ್ರಮದಲ್ಲಿ ವಾಸ್ತವ್ಯಹೂಡಿ ಕಲಿಯುವವರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page