ವಿದ್ಯಾನಗರ ಜೆಸಿಐಯಿಂದ ಇಫ್ತಾರ್ ಸಂಗಮ

ವಿದ್ಯಾನಗರ: ಮಾನವ ಸೌಹಾರ್ದ, ಮತ ಮೈತ್ರಿಯನ್ನು ಎತ್ತಿಹಿಡಿದು ಜೆಸಿಐ ವಿದ್ಯಾನಗರ ಇಫ್ತಾರ್ ಸಂಗಮ ನಡೆಸಿತು. ನಾಯಮ್ಮಾರ್‌ಮೂಲೆ ಎಎಫ್‌ಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ರಮ್ಲಾ ಎನ್.ಎ. ಅಧ್ಯಕ್ಷತೆ ವಹಿಸಿದರು. ವಿದ್ಯಾನಗರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ವಿಜಯನ್ ಮೇಲತ್ತ್ ಮುಖ್ಯ ಅತಿಥಿಯಾಗಿದ್ದರು. ಅಬ್ದುಲ್ ಮಹರೂಪ್ ಇಫ್ತಾರ್ ಸಂದೇಶ ನೀಡಿದರು. ಪ್ರೋಗ್ರಾಮ್ ಡೈರಕ್ಟರ್ ರಾಸೀದ್ ಕೆ.ಎಚ್. ಸ್ವಾಗತಿಸಿದರು. ಹಲವರು ಭಾಗವಹಿಸಿದರು.

You cannot copy contents of this page