ವಿಶ್ವಹಿಂದೂ ಪರಿಷತ್ ಜಿಲ್ಲಾ ಸಮಿತಿ, ಕಣ್ಣೂರು ವಿಭಾಗ ಸಮಿತಿ ಪದಾಧಿಕಾರಿಗಳ ಆಯ್ಕೆ
ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕೇರಳ ಪ್ರಾಂತೀಯ ಸಮಿತಿ ನೇತೃತ್ವದಲ್ಲಿ ಕೋಟಯಂ ತಿರುನಕ್ಕರದಲ್ಲಿರುವ ಇಂದ್ರಪ್ರಸ್ತ ಸಭಾಂಗಣದಲ್ಲಿ ಮೂರು ದಿನ ಜರಗಿದ ವಾರ್ಷಿಕ ಪ್ರಾಂತೀಯ ಬೈಟೆಕ್ನಲ್ಲಿ ಜಿಲ್ಲೆಗಳ ನೂತನ ಸಮಿತಿಗಳನ್ನು ಘೋಷಿಸಲಾಯಿತು. ಇದರಲ್ಲಿ ಕಾಸರಗೋಡು ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಜಯದೇವ ಖಂಡಿಗೆ, ಕಾರ್ಯಾಧ್ಯಕ್ಷರಾಗಿ ಗೋಪಾಲ ಶೆಟ್ಟಿ ಅರಿಬೈಲು, ಉಪಾಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಮಂಗಲ್ಪಾಡಿ, ಪದ್ಮಾ ಮೋಹನ ದಾಸ್ ಐಲ, ಪ್ರಧಾನ ಕಾರ್ಯದರ್ಶಿ ಯಾಗಿ ಗಣೇಶ ಮಾವಿನಕಟ್ಟೆ, ಜೊತೆ ಕಾರ್ಯದರ್ಶಿಗಳಾಗಿ, ಶರ್ಮಿಳಾ ಮಂಗಲ್ಪಾಡಿ, ಹರೀಶ್ ರೈ ಪುತ್ರಕಳ, ಸುರೇಶ್ ಬಾಬು ಕಾನತ್ತೂರು, ಕೋಶಾಧಿಕಾರಿಯಾಗಿ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ,
ಮಾತೃ ಶಕ್ತಿ ಸಂಯೋಜಕಿಯಾಗಿ ಮೀರಾ ಆಳ್ವ, ಸಹ ಸಂಯೋಜಕಿಯರಾಗಿ ಹರಿಣಿ ನಾಯಕ್ ಸೂರಂಬೈಲು, ಪ್ರೀತಿ ರೈ ಮೀಂiÀiಪದವು, ದುರ್ಗಾ ವಾಹಿನಿ ಸಂಯೋಜಕಿಯಾಗಿ ಆಶಾ ಶಿವಪ್ರಸಾದ್ ಕಣ್ವತೀರ್ಥ, ಸಹ ಸಂಯೋಜಕಿಯಾಗಿ ಅಕ್ಷಿತಾ ಅಂಬಾರ್, ಬಜರಂಗದಳ ಸಂಯೋಜಕರಾಗಿ ಯತೀಶ್ ಬೆದ್ರಡಿ, ಸಹ ಸಂಯೋಜಕರಾಗಿ ರೂಪೇಶ್ ಶೆಟ್ಟಿ ಬದಿಯಡ್ಕ, ಪುಷ್ಪರಾಜ್ ವಿದ್ಯಾನಗರ, ಸತ್ಸಂಗ ಪ್ರಮುಖರಾಗಿ ಮಾಧವನ್ ನಂಬೂದಿರಿ ಪೆರ್ಲ, ಸೇವಾ ಪ್ರಮುಖರಾಗಿ ಮೋಹನ ಬಲ್ಲಾಳ್ ಬಾಯÁರು, ಬಾಲ ಸಂಸ್ಕಾರ ಪ್ರಮುಖರಾಗಿ ಸೌಮ್ಯ ಪ್ರಕಾಶ್, ಧರ್ಮ ಪ್ರಸಾರ ಪ್ರಮುಖರಾಗಿ ವಾಮನ ಆಚಾರ್ಯ ಬೋವಿಕ್ಕಾನ, ಸಹ ಪ್ರಮುಖರಾಗಿ ಕೃಷ್ಣ ಅಮ್ಮಂಗೋಡು, ಪ್ರಚಾರ ಪ್ರಸಾರ ಪ್ರಮುಖರಾಗಿ ಮೋಹನ ಆದೂರು, ಗೋ ರಕ್ಷಾ ಪ್ರಮುಖರಾಗಿ ರವಿಚಂದ್ರ ಎಡನೀರು, ಸಾಮಾಜಿಕ ಸಾಮರಸ್ಯ ಪ್ರಮುಖರಾಗಿ ಮಂಜುನಾಥ ಮಾನ್ಯ, ಧರ್ಮಾಚಾರ್ಯ ಸಂಪರ್ಕ ಪ್ರಮುಖರಾಗಿ ಎ.ಟಿ ನಾಯಕ್ ತಾಳಿಪಡ್ಪು, ಮಂದಿರ ಅರ್ಚಕ ಪುರೋಹಿತ ಪ್ರಮುಖರಾಗಿ ಶಂಕರ ಭಟ್ ಉಳುವಾನ, ಲೀಗಲ್ ಸೆಲ್ ಅಡ್ವೈಸರಾಗಿ ಅಡ್ವ. ವಿನಯ ಕುಮಾರ್ ಬದಿಯಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಸಂಕಪ್ಪ ಭಂಡಾರಿ ಬಳ್ಳಬೆಟ್ಟು ಎಂಬಿವರನ್ನು ಆಯ್ಕೆ ಮಾಡಲಾಯಿತು. ಅದೇ ರೀತಿ, ಕಣ್ಣೂರು ವಿಭಾಗ ಸಮಿತಿಯ ಮಾತೃ ಶಕ್ತಿ ವಿಭಾಗ್ ಸಂಯೋಜಕಿಯಾಗಿ ಸತಿ ಕೊಡೋತ್, ವಿಭಾಗ್ ಸೇವಾ ಪ್ರಮುಖರಾಗಿ ಸುರೇಶ ಶೆಟ್ಟಿ ಪರಂಕಿಲ, ಮಂದಿರ ಅರ್ಚಕ ಪುರೋಹಿತ ವಿಭಾಗ್ ಪ್ರಮುಖರಾಗಿ ಯಾದವ ಕೀರ್ತೇಶ್ವರ, ಬಜರಂಗದಳ ವಿಭಾಗ್ ಸಹ ಸಂಯೋಜಕರಾಗಿ ಪ್ರದೀಪ್ ಪೆರಿಯಾಲ್, ವಿಭಾಗ್ ಸಂಘಟನಾ ಕಾರ್ಯದರ್ಶಿ ಯಾಗಿ ವಿ.ಆರ್ ಚಂದ್ರಶೇಖರನ್ ಎಂಬಿ ವರನ್ನು ಕೂಡ ಘೋಷಿಸಲಾಯಿತು.