ಸಂಜೆ 5 ಗಂಟೆಗೆ ಮೊಳಗಲಿದೆ ಸೈರನ್ ಭೀತಿ ಬೇಡ

ಕಾಸರಗೋಡು: ಇಂದು ಸಂಜೆ 5 ಗಂಟೆ ವೇಳೆಗೆ ಜಿಲ್ಲೆಯ ಆರು ಕೇಂದ್ರಗಳಲ್ಲಿ ಸೈರನ್ ಮೊಳಗಲಿದ್ದು, ಸ್ಥಳೀಯರು ಭೀತಿ ಪಡಬೇಕಾದ ಅಗತ್ಯವಿಲ್ಲವೆಂದು ಸಂಬಂಧಪಟ್ಟವರು ಸೂಚಿಸಿದ್ದಾರೆ. ಕವಚಂ ಯೋಜನೆಯ ರಾಜ್ಯ ಮಟ್ಟದ ಉದ್ಘಾಟನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರ ದಲ್ಲಿ ಸಂಜೆ ಉದ್ಘಾಟಿಸಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಿದ ಸೈರನ್ ವ್ಯವಸ್ಥೆ ಸರಿಯಾಗಿ ಇದೆಯೇ ಎಂಬ ಬಗ್ಗೆ ಪರೀಕ್ಷಿಸಲು ಅದನ್ನು ಮೊಳಗಿ ಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ಜಿಎಸ್‌ಬಿಎಸ್ ಕುಂಬಳೆ, ಅಡ್ಕತ್ತಬೈಲು, ಚೆರ್ವತ್ತೂರು, ಪುಲ್ಲೂರು ಮತ್ತು ವೆಳ್ಳರಿಕುಂಡ್‌ಗಳಲ್ಲಿ ಸೈರನ್‌ಗಳನ್ನು ಸ್ಥಾಪಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page