ಸಿಐಟಿಯು ಮಂಜೇಶ್ವರ ಏರಿಯಾ ಸಮಿತಿ ವತಿಯಿಂದ ಉಪ್ಪಳದಲ್ಲಿ ಧರಣಿ
ಮಂಜೇಶ್ವರ: ಕೇಂದ್ರ ಸರ್ಕಾರ 2005ರಲ್ಲಿ ಆಶಾ ಯೋಜನೆ ಯನ್ನು ಜಾರಿಗೆ ತಂದ ಬಳಿಕ ಸಾಮಾಜಿಕ ಕಾರ್ಯಕರ್ತರಾಗಿ ನೇಮಕ ಗೆೆÆಂಡ ಆಶಾಕಾರ್ಯಕತÉðಯರನ್ನು ಕೇಂದ್ರ ಸರ್ಕಾರ ಸ್ಥಿರ ಕಾರ್ಮಿಕರಾಗಿ ನೇಮಿಸಬೇಕು, ಕನಿಷ್ಠ ವೇತನ 26000ರೂ. ಕೊಡಬೇಕು, ಪಿ ಎಫ್, ಪೆನ್ಶನ್ ಗ್ರಾಟಿವಿಟಿ ನೀಡಬೇಕು, ಇನ್ಶೂರೆನ್ಸ್ ಪುನರ್ಸ್ಥಾಪಿಸಬೇಕು, ಕೇಂದ್ರ ಬಜೆಟ್ನಲ್ಲಿ ರಾಜ್ಯ ಸರ್ಕಾರಕ್ಕೆ ನೀಡುವ ಅರ್ಹವಾದ ಪಾಲು ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಸಿ.ಐ.ಟಿ.ಯು ಮಂಜೇಶ್ವರ ಏರಿಯಾ ಸಮಿತಿ ವತಿಯಿಂದ ನಿನ್ನೆ ಬೆಳಿಗ್ಗೆ ಉಪ್ಪಳ ಪೋಸ್ಟ್ ಆಫೀಸ್ ಮುಂದೆ ಧರಣಿ ನಡೆಯಿತು. ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಗಿರಿ ಕೃಷ್ಣನ್ ಉದ್ಘಾಟಿಸಿ ಮಾತನಾಡಿ ದರು. ಕೇಂದ್ರ ಸರ್ಕಾರ ಇನ್ಸೆಂಟಿವ್ ಮುಖಾಂತರ ಕೇವಲ 60 % ಮಾತ್ರ ಕೊಡುತ್ತಿದ್ದು ಬಾಕಿ ಮೊತ್ತ 40% ರಾಜ್ಯ ಸರ್ಕಾರ ಗಳು ಕೊಡುತ್ತಿದ್ದು ಕೇಂದ್ರದ ಯೋಜನೆ ಯಾದರು ಅವರಿಗೆ 3000 ಮಾತ್ರ ಇನ್ಸೆಂಟಿವ್ ಕೊಡುತ್ತದೆ ಅದರಲ್ಲೂ 1800 ಮಾತ್ರ ಪ್ರತಿ ಆಶಾ ಕಾರ್ಯಕರ್ತೆಯರಿಗೆ ನೀಡುತ್ತದೆ ಎಂದರು.
ಸಿಐಟಿಯು ಆಶಾ ಯೂನಿಯನ್ ಮಂಜೇಶ್ವರ ಏರಿಯಾ ಅಧ್ಯಕ್ಷೆ ಜಲಜಾ .ಸಿ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಏರಿಯಾ ಕಾರ್ಯದರ್ಶಿ ಪ್ರಶಾಂತ್ ಕನಿಲ, ಡಿ ಕಮಲಾಕ್ಷ, ಸತೀಶ್ ಎಲಿಯಾಣ, ಹುಸೇನ್ ಮಾಸ್ಟರ್ ಉಪಸ್ಥಿತರಿದ್ದರು. ಕೆ ಎನ್ ಶುಭಾ ಸ್ವಾಗತಿಸಿದರು.