ಸ್ಥಳೀಯರು, ಪೊಲೀಸರಿಗೆ ತಲೆನೋವಾದ ಬಾಲಕನ ನಾಪತ್ತೆ ಪ್ರಕರಣ: ಸುಖಾಂತ್ಯದಿಂದ ನಿಟ್ಟುಸಿರು

ಕುಂಬಳೆ: 15ರ ಬಾಲಕ ಕೊಡ್ಯಮ್ಮೆಯಿಂದ ನಾಪತ್ತೆಯಾದ ಬಗ್ಗೆ ಕುಂಬಳೆಯಲ್ಲಿ ನಿನ್ನೆ ಸಂಜೆ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರಿಗೆ ನಾಪತ್ತೆ ಬಗ್ಗೆ ಮಾಹಿತಿ ನೀಡಿದಾಗ ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಮೊಬೈಲ್‌ಗೆ  ಕರೆದಾಗ ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕ ಉಂಟಾದಾಗ ಇಂದು ಮುಂಜಾನೆ ಬಾಲಕ ತಾಯಿಗೆ ಕರೆ ಮಾಡಿದ್ದಾನೆ.

ಕೊಡ್ಯಮ್ಮೆಯ ಬಾಲಕ ಇಂದು ತಿಳಿಸಿದಂತೆ ನಿನ್ನೆ ಸಂಜೆ ಬಟ್ಟೆಬರೆ ಖರೀದಿಗೆಂದು ಕಾಸರಗೋಡಿಗೆ ತಲುಪಿದ್ದನಂತೆ. ಬಳಿಕ ರಾತ್ರಿಯಾದ ಹಿನ್ನೆಲೆಯಲ್ಲಿ ತಂದೆಯ ಸಹೋದರಿ ಯ ಮನೆಯಾದ ಮುಳಿಯಡ್ಕಕ್ಕೆ ತೆರಳಿದ್ದಾನೆ. ಮನೆಗೆ ಕರೆ ಮಾಡಲು ಯತ್ನಿಸಿದರೆ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಬಳಿಕ ಅಲ್ಲಿನ ಮನೆಯವರ ಫೋನ್‌ನಿಂದ ಕರೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾನೆ. ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿ ರುವುದರಲ್ಲಿ ಸ್ಥಳೀಯರು ಹಾಗೂ ಪೊಲೀಸರು ನಿಟ್ಟುಸಿರುವ ಬಿಟ್ಟರು.

Leave a Reply

Your email address will not be published. Required fields are marked *

You cannot copy content of this page