ಸ್ವಂತ ಕಟ್ಟಡವಿರುವ ಅಂಗನವಾಡಿಗಳಲ್ಲಿ ಶೀಥಲೀಕರಣ: ನಗರಸಭೆ ತೀರ್ಮಾನ
ಕಾಸರಗೋಡು: ನಗರಸಭೆಯಲ್ಲಿ ಸ್ವಂತ ಕಟ್ಟಡವಿರುವ ಅಂಗನವಾಡಿಗಳನ್ನು ಶೀಥಲೀಕರಣಗೊಳಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಕಾಸರಗೋಡು ನಗರಸಭೆಯ ಬಜೆಟ್ನಲ್ಲಿ ಇದಕ್ಕಾಗಿ 12 ಲಕ್ಷ ರೂ. ಮೀಸಲಿಡಲಾಗಿದೆ. ಮುಂದಿನ ಎಪ್ರಿಲ್ ಮುಂಚಿತವಾಗಿ ಯೋಜನೆ ಜಾರಿಗೆ ಬರಲಿದೆ. ಅವಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಭಾರೀ ಬಿಸಿಯನ್ನು ಸಹಿಸಿಕೊಂಡು ಮಕ್ಕಳು ಸಂಕಷ್ಟಪಡುವುದನ್ನು ತಪ್ಪಿಸಲು ಹಾಗೂ ಅವರ ಆರೋಗ್ಯದ ಬಗ್ಗೆ ಗಮನಹರಿಸಿ ಈ ತೀರ್ಮಾನ ಕೈಗೊಂಡಿರುವುದಾಗಿ ನಗರಸಭೆ ಅಧ್ಯಕ್ಷ ಅಬ್ಬಾಸ್ ಬೀಗಂ ತಿಳಿಸಿದ್ದಾರೆ. 31 ಅಂಗನವಾಡಿಗಳಿಗೆ ನಗರಸಭೆಯಲ್ಲಿ ಸ್ವಂತ ಕಟ್ಟಡ ಇದ್ದು, ಇದರಲ್ಲಿ ಈಗ ಯಾವುದೇ ಅಂಗನವಾಡಿಯಲ್ಲಿಯೂ ಎ.ಸಿ. ವ್ಯವಸ್ಥೆ ಇಲ್ಲ. ಇದರ ವಿದ್ಯುತ್ ದರವನ್ನು ನಗರಸಭೆ ಪಾವತಿಸುತ್ತಿದೆ. ಎ.ಸಿ. ಮಾಡಿದ ಮೇಲೂ ವಿದ್ಯುತ್ ದರದಲ್ಲಿ ಹೆಚ್ಚಳವಾದರೂ ಅದನ್ನು ನಗರಸಭೆ ಪಾವತಿಸಲಿದೆಯೆಂದು ಅಧ್ಯಕ್ಷರು ತಿಳಿಸಿದ್ದಾರೆ.
ಕಾಞಂಗಾಡ್ ನಗರಸಭೆ ಮೀನಾಪಿಸ್ ಕಡಪ್ಪುರಂನಲ್ಲಿ ಒಂದು ಅಂಗನವಾಡಿಯಲ್ಲಿ ಎರಡು ವರ್ಷದ ಹಿಂದೆ ಸ್ಥಳೀಯರು ಪ್ರಾಯೋಜಕತ್ವದಲ್ಲಿ ಎ.ಸಿ. ಸ್ಥಾಪಿಸಲಾಗಿತ್ತು. ಆದರೆ ಆರು ತಿಂಗಳಿಂದ ಅದು ಕಾರ್ಯಾಚರಿಸುತ್ತಿಲ್ಲ. ವಯರಿಂಗ್ ನಡೆಸಿ ಅದನ್ನು ಕಾರ್ಯಾಚರಿಸುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ರೀತಿ ಕಲ್ಲೂರಾವಿ, ಮರಕೋಪ್ ಕಡಪ್ಪುರಂ ಎಂಬೆಡೆಗಳಲ್ಲೂ ಪ್ರಾಯೋಜಕತ್ವದಲ್ಲಿ ಎ.ಸಿ. ಸ್ಥಾಪಿಸಲಿರುವ ಯತ್ನ ಸ್ಥಳೀಯರು ನಡೆಸುತ್ತಿದ್ದಾರೆ.