ಹೊಗೆಸೊಪ್ಪು ಉತ್ಪನ್ನ ವಶ: ಓರ್ವ ಸೆರೆ
ಉಪ್ಪಳ: ಶಂಕಾಸ್ಪದ ರೀತಿ ಯಲ್ಲಿ ಕಂಡು ಬಂದ ವ್ಯಕ್ತಿಯನ್ನು ಗಸ್ತು ನಡೆಸುತ್ತಿದ್ದ ಮಂಜೇಶ್ವರ ಠಾಣೆ ಎಸ್ ಐ ಉಮೇಶ್ ಸೆರೆ ಹಿಡಿದು ಪರಿಶೀಲಿಸಿದಾಗ 115 ಪ್ಯಾಕೆಟ್ ನಿಷೇಧಿತ ಹೊಗೆಸೊಪ್ಪು ಉತ್ಪನ್ನ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಸೆರೆ ಹಿಡಿದು ಕೇಸು ದಾಖಲಿಸಲಾಗಿದೆ. ಉತ್ತರಪ್ರದೇಶ ನಿವಾಸಿ ಅರವಿಂದ್ ಸೋಂಕಾರ್ (30) ಸೆರೆಯಾಗಿದ್ದು, ನಿನ್ನೆ ಸಂಜೆ ಉಪ್ಪಳ ಬಸ್ ನಿಲ್ದಾಣ ಪರಿಸರದಲ್ಲಿ ನಿಂತಿದ್ದ ವೇಳೆ ಸೆರೆ ಹಿಡಿಯಲಾಗಿದೆ.