ಹೊಸಂಗಡಿ ರೈಲ್ವೇ ಗೇಟ್ ಪರಿಸರದ ಹಳಿ ಮಧ್ಯೆ ಪೊದೆ ಬೆಳೆದು ಸಂಚಾರ ಸಮಸ್ಯೆ: ರೈಲು ಹಳಿಯಲ್ಲಿ  ಅಪಾಯ ಸಂಚಾರ

ಮಂಜೇಶ್ವರ: ವಿವಿಧ ಕಡೆ ರೈಲ್ವೇ ಹಳಿಯ ಮದs್ಯ ಭಾಗದಲ್ಲಿ ಕಾಡು ಪೊದೆಗಳು ಬೆಳೆದು ಜನರ ಸಂಚಾರಕ್ಕೆ ಸ್ಥಳವಕಾಶ ಇಲ್ಲದಿರುವುದರಿಂದ ಹಳಿ ಮಧ್ಯೆಯಿಂದಲೇ ನಡೆದು ಹೋಗು ತ್ತಿರು ವುದು ಅಪಾಯಕ್ಕೆ ಕಾರಣವಾಗು ತ್ತಿದೆ. ಹೊಸಂಗಡಿ ರೈಲ್ವೇ ಗೇಟ್ ಸಮೀಪದ ರೈಲು ಹಳಿ ಮಧ್ಯ ಭಾಗ ಹಾಗೂ ಇಕ್ಕೆಡೆಗಳಲ್ಲಿ ಪೊದೆಗಳು ಬೆಳೆದು ಕೊಂಡು ಸ್ಥಳೀಯರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿ ರುವುದಾಗಿ ದೂರಲಾಗಿದೆ. ಈ ಪರಿಸರದ ರೈಲೇ ಹಳಿ ಇಕ್ಕೆಡೆಗಳಲ್ಲಿ ಹಲವಾರು ಮನೆಗಳು, ಬಾಡಿಗೆ ಮನೆಗಳು ಇದ್ದು, ದಿನನಿತ್ಯ ಕಾಲೇಜು ಹಾಗೂ ಕೆಲಸಗಳಿಗೆ ಹೊಸಂಗಡಿ ಪ್ರವೇಶಿಸಲು ಹತ್ತಿರ ದಾರಿಯಾಗಿ ರೈಲು ಹಳಿಯಿಂದಲೇ ನಡೆದು ಹೋ ಗುತ್ತಿದ್ದಾರೆ. ಆದರೆ ಹಳಿ ಮಧ್ಯೆ ಹಾಗೂ ಇಕ್ಕೆಡೆಗಳಲ್ಲಿ ಪೊದೆಗಳು ಬೆಳೆದು ಕೊಂಡಿರುವುದರಿAದ ಹಳಿ ಮಧ್ಯದಿಂ ದಲೇ ನಡೆದು ಹೋಗು ತ್ತಿರುವ ದೃಶ್ಯಗಳು ಕಂಡು ಬರುತ್ತಿದ್ದು, ಇದು ಭಾರೀ ಅಪಾಯಕ್ಕೆ ಕಾರಣ ವಾಗಿದೆ. ಸಂಬAಧಪಟ್ಟ ಅಧಿಕಾರಿ ಗಳು ಶುಚೀಕರಣಕ್ಕೆ ಕ್ರಮಕೈಗೊ ಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page