12 ಅನಧಿಕೃತ ಕಡವು ನಾಶ

ಕುಂಬಳೆ: ಶಿರಿಯ ವಳಯಂನಲ್ಲಿ ಕಾರ್ಯಾಚರಿಸುತ್ತಿದ್ದ 12 ಅನಧಿಕೃತ ಕಡವುಗಳನ್ನು ಡಿವೈಎಸ್‌ಪಿ ಸುನಿಲ್ ಕುಮಾರ್ ಹಾಗೂ ಕುಂಬಳೆ ಎಡಿಶನಲ್ ಎಸ್‌ಐ ವಿ.ಕೆ. ವಿಜಯನ್ ನೇತೃತ್ವದಲ್ಲಿ ನಿನ್ನೆ ಜೆಸಿಬಿ ಬಳಸಿ ನಾಶಪಡಿಸಲಾಯಿತು. ಇಲ್ಲಿ ಹಲವು ಕಾಲದಿಂದ ಅನಧಿಕೃತವಾಗಿ ಕಡವುಗಳು ಕಾರ್ಯಾಚರಿಸುತ್ತಿದ್ದು, ಭಾರೀ ಪ್ರಮಾಣದ ಹೊಯ್ಗೆ ಕಳ್ಳಸಾಗಾಟ ನಡೆಯುತ್ತಿರುವ ಬಗ್ಗೆ ದೂರಲಾಗಿತ್ತು. ಈ ಕುರಿತಾಗಿ ‘ಕಾರವಲ್’ ನಿನ್ನೆ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಪೊಲೀಸರು ಹೊಯ್ಗೆ ಕಡವು ನಾಶಗೊಳಿಸಲು ಕ್ರಮ ಕೈಗೊಂಡಿದ್ದಾರೆ.

RELATED NEWS

You cannot copy contents of this page