ಅನಂತಪುರ ಕೈಗಾರಿಕಾ ಎಸ್ಟೇಟ್‌ನ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಬೆಂಕಿ ಅನಾಹುತ

ಕುಂಬಳೆ: ಅನಂತಪುರ ಕೈಗಾರಿಕಾ ಎಸ್ಟೇಟ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ  ಭಾರೀ ನಾಶನಷ್ಟ ಸಂಭವಿಸಿರು ವುದಾಗಿ ವರದಿಯಾಗಿದೆ. ಎಸ್ಟೇಟ್ ನಲ್ಲಿರುವ ಮಾರ್ಕ್ ವುಡ್ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಮುಂಜಾನೆ 4 ಗಂಟೆ ವೇಳೆ ಬೆಂಕಿ ಅನಾಹುತವುಂಟಾಗಿದೆ. ಕಾಸರ ಗೋಡು, ಉಪ್ಪಳ, ಕಾಞಂಗಾಡ್ ಹಾಗೂ ಕುತ್ತಿಕೋಲ್ ಅಗ್ನಿಶಾಮಕದ ಎಂಟು ಯೂನಿಟ್‌ಗಳು ಗಂಟೆಗಳ ಕಾಲ ನಡೆಸಿದ ಕಾರ್ಯಾ ಚರಣೆಯಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪೇರಾಲ್‌ಕಣ್ಣೂರಿನ ಅಬ್ದುರಹಿಮಾನ್ ರ ಮಾಲಕತ್ವದಲ್ಲಿ ರುವ ಫ್ಯಾಕ್ಟರಿ ಇದಾಗಿದೆಯೆಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ 12 ಗಂಟೆ …

ಹೋಟೆಲ್‌ಗಳಿಂದ ಪ್ಲಾಸ್ಟಿಕ್ ಉತ್ಪನ್ನ ವಶ: ಕುಂಬಳೆಯಲ್ಲಿ ಆಹಾರ ವಿತರಣಾ ಕೇಂದ್ರಗಳಿಗೆ ವ್ಯಾಪಕ ದಾಳಿ

ಕುಂಬಳೆ: ಕುಂಬಳೆಯ ಹೋಟೆಲ್‌ಗಳು ಹಾಗೂ ಇತರ ಆಹಾರ ವಿತರಣಾ ಸಂಸ್ಥೆಗಳಿಗೆ ಆರೋಗ್ಯ ಇಲಾಖೆ, ಪಂಚಾಯತ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳು, ಪೇಪರ್ ಗ್ಲಾಸ್, ಪ್ಲೇಟ್‌ಗಳನ್ನು ವಶಪಡಿಸಲಾಗಿದೆ.  ಹೋಟೆಲ್‌ಗಳಲ್ಲಿ ಹಾಗೂ ಇತರ ಆಹಾರ ವಿತರಣಾ ಕೇಂದ್ರಗಳಲ್ಲಿ ಹಳಸಿದ ಆಹಾರ ಪದಾರ್ಥಗಳನ್ನು ಹಾಗೂ ಆರೋಗ್ಯಕ್ಕೆ ಹಾನಿಕಾರಕವಾದ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿರುವುದಾಗಿ ಲಭಿಸಿದ ದೂರಿನ ಹಿನ್ನೆಲೆಯಲ್ಲಿ ಜಂಟಿ ತಪಾಸಣೆ ನಡೆಸಲಾಗಿದೆ. ಆದರೆ ಯಾವುದೇ ಕಡೆಯಲ್ಲಿ ಈ ರೀತಿಯ ಸಾಮಗ್ರಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಹೆಚ್ಚಿನ ಸಂಸ್ಥೆಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳಾದ ಕವರ್, ಪ್ಲೇಟ್, …

ಶಿಥಿಲಗೊಂಡ ಮನೆ: ಮನನೊಂದ ರಬ್ಬರ್ ಕೃಷಿಕ ನೇಣು

ಕಾಸರಗೋಡು: ಮನೆ ಜೀರ್ಣಗೊಂಡು ನಾಶವಾದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದ ರಬ್ಬರ್ ಕೃಷಿಕ ನೇಣು ಬಿಗಿದು ಆತ್ಮಹತ್ಯೆಗೈದಿರುವ ಘಟನೆ ನಡೆದಿದೆ. ಬೇಡಡ್ಕ ಕರಿವೇಡಗಂ ಪಳ್ಳಕ್ಕಾಟ್ ಹೌಸ್‌ನ ವಿ.ಎನ್. ಸುಕುಮಾರನ್ (76) ಮೃತಪಟ್ಟವರು. ನಿನ್ನೆ ಇವರು ಮನೆಯ ಮುಂಭಾಗದಲ್ಲಿರುವ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹವನ್ನು ಪತ್ತೆಹಚ್ಚಲಾಗಿತ್ತು. ಬೇಡಡ್ಕ ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ. ಮೃತರು ಪತ್ನಿ ಪುಷ್ಪವಲ್ಲಿ, ಮಕ್ಕಳಾದ ಶಾಜಿ, ಶೈಜು, ಸೊಸೆಯಂದಿರಾದ ಸುಧಾ, ನವ್ಯ, ಸಹೋದರರಾದ ಶಿವನ್, ವಿಜಯನ್, ರಾಜನ್, ಸಹೋದರಿಯರಾದ ರಮಣಿ, ಕುಂಞಾಮಿನಿ, ತಂಗಮ್, …

ಹೃದಯಾಘಾತ ವ್ಯಾಪಾರಿ ನಿಧನ

ಉಪ್ಪಳ: ಮಜೀರ್ಪಳ್ಳ ನಿವಾಸಿ ಹಿರಿಯವ್ಯಾಪಾರಿಯಾದ ಪ್ರಭಾಕರ ಕೆ. (62) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ರಾತ್ರಿ 7.30 ರ ವೇಳೆ ಇವರಿಗೆ ಮನೆಯಲ್ಲಿ ಹೃದಯಾಘಾತವುಂಟಾಗಿದೆ. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸುತ್ತಿದ್ದಂತೆ ನಿಧನ ಸಂಭವಿಸಿದೆ. ಮಜೀರ್ಪಳ್ಳದಲ್ಲಿ ವ್ಯಾಪಾರಿಯಾಗಿದ್ದ ಇವರು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವರ್ಕಾಡಿ ಘಟಕದ ಮಾಜಿ ಉಪಾಧ್ಯಕ್ಷರಾಗಿದ್ದಾರೆ. ದಿವಂಗತರಾದ ಜಾಯಿರನ್- ಸೀತಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಶಕೀಲಾ, ಮಕ್ಕಳಾದ ಅಕ್ಷತಾ, ಅನುಷ, ಅಳಿಯಂದಿರಾದ ಅಭಿಲಾಶ್, ಮಂಜಿತ್, ಸಹೋದರ ದಿವಾಕರ ಎಸ್.ಜೆ (ಕಾಂಗ್ರೆಸ್ ಮಂಜೇಶ್ವರ ಬ್ಲಾಕ್ …

ಹುಲ್ಲು ಹೆರೆಯುತ್ತಿದ್ದ ವೇಳೆ  ಬಿದ್ದು ಗಾಯಗೊಂಡ ವ್ಯಕ್ತಿ ಮೃತ್ಯು

ಬದಿಯಡ್ಕ:  ಹುಲ್ಲು ಹೆರೆಯುತ್ತಿದ್ದ ವೇಳೆ ಹೊಂಡಕ್ಕೆ ಬಿದ್ದು  ಗಾಯಗೊಂಡು ಚಿಕಿತ್ಸೆಯ ಲ್ಲಿದ್ದ ವ್ಯಕ್ತಿ ಮೃತಪಟ್ಟರು. ಮುಂಡ್ಯತ್ತಡ್ಕ ಸಮೀಪದ ಮಲಂಗರದ ಮುಹಮ್ಮದ್ (75) ಮೃತಪಟ್ಟ ವ್ಯಕ್ತಿ. ಈ ತಿಂಗಳ ೨೫ರಂದು ಸಂಜೆ  ಮನೆ ಸಮೀಪ ಹುಲ್ಲು ಹೆರೆಯುತ್ತಿದ್ದ ವೇಳೆ ಆಯತಪ್ಪಿ ಹೊಂಡಕ್ಕೆ ಬಿದ್ದಿದ್ದರೆನ್ನಲಾಗಿದೆ. ಇದರಿಂದ  ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನ ಸಂಭವಿಸಿದೆ. ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ಲತೀಫ್, ಬಶೀರ್, ಅಸೀಸ್,ಆಯಿಶ, ಅವ್ವಮ್ಮ, ನಫೀಸ, ಮೈಮೂನ,ಸಮೀರ,ಅಳಿಯ-ಸೊಸೆಯಂದಿರಾದ ಕಲಂದರ ಬೀವಿ, ಫಾಯಿಸ, …

ಮಧು ಲಾಟರಿಗೆ ಸುವರ್ಣಕೇರಳದ ದ್ವಿತೀಯ ಬಹುಮಾನ 30ಲಕ್ಷ ರೂ.

ಕಾಸರಗೋಡು: ಸುವರ್ಣ ಕೇರಳ ಲಾಟರಿಯ ದ್ವಿತೀಯ ಬಹುಮಾನ 30 ಲಕ್ಷ ರೂ. ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪರಿಸರದ ಮಧು ಲಾಟರಿ ಏಜೆನ್ಸಿಯಿಂದ ಮಾರಾಟ ಮಾಡಿದ ಟಿಕೆಟ್‌ಗೆ ಲಭಿಸಿದೆ. ಆರ್‌ವಿ೮೧೫೪೭೪ ನಂಬ್ರದ ಟಿಕೆಟ್‌ಗೆ ಈ ಬಹುಮಾನ ಲಭಿಸಿದೆ. ಇಲ್ಲಿ ಕೇರಳ ಲಾಟರಿಯ ಸಮ್ಮರ್ ಬಂಪರ್ ಟಿಕೆಟ್‌ಗಳ ಮಾರಾಟ ಆರಂಭಗೊಂಡಿದ್ದು ಪ್ರಥಮ ಬಹುಮಾನ 10 ಕೋಟಿ ರೂ. ಆಗಿದೆ ಎಂದು ಮಧು ಲಾಟರೀಸ್‌ನ ಮಾಲಕರು ತಿಳಿಸಿದ್ದಾರೆ.

ಹುಚ್ಚುನಾಯಿ ಕಚ್ಚಿ ಹಸು ಸಾವು: ಮನನೊಂದ ರೈತ ವಿಷಸೇವಿಸಿ ಆತ್ಮಹತ್ಯೆ; ನಾಡಿನಲ್ಲಿ ಶೋಕಸಾಗರ

ಬೋವಿಕ್ಕಾನ: ಹುಚ್ಚುನಾಯಿ ಕಡಿತಕ್ಕೊಳಗಾಗಿ ದನ ಸಾವನ್ನಪ್ಪಿರು ವುದರಿಂದ ಮನನೊಂದ ರೈತ ವಿಷ ಪ್ರಾಶನಗೈದು ಆತ್ಮಹತ್ಯೆಗೈದ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಮುಳಿಯಾರು ಪಾಣೂರು ಬಾಲನಡ್ಕದ ನಾರಾಯಣನ್ (80) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಮೊನ್ನೆ ಬೆಳಿಗ್ಗೆ  ಹಿತ್ತಿಲಲ್ಲಿ ಗಂಭೀರಾ ವಸ್ಥೆಯಲ್ಲಿ ಕಂಡುಬಂದಿದ್ದು ಅವರನ್ನು ಮನೆಯವರು ತಕ್ಷಣ ಚೆಂಗಳ ಸಹಕಾರಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಭತ್ತ, ಕಂಗು ಹಾಗೂ ಹೈನುಗಾರಿಕಾ ಕೃಷಿಕರಾಗಿರುವ ನಾರಾಯಣನ್‌ರ ಎರಡು ವರ್ಷ ಪ್ರಾಯದ ಹಸುವನ್ನು …

ಟೋಲ್ ಬೂತ್ ಘರ್ಷಣೆ: ಸಿಪಿಎಂ, ಲೀಗ್ ನೇತಾರರ ಸಹಿತ 10 ಮಂದಿ ವಿರುದ್ಧ ಕೇಸು

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಆರಿಕ್ಕಾಡಿಯಲ್ಲಿರುವ ಟೋಲ್ ಬೂತ್‌ನಲ್ಲಿ    ಘರ್ಷಣೆ ಹಾಗೂ ಸಾರಿಗೆ ಅಡಚಣೆ ಸೃಷ್ಟಿಸಿದ ಆರೋಪ ದಂತೆ  ಕ್ರಿಯಾಸಮಿತಿ ನೇತಾರರಾದ  ಸಿಪಿಎಂ, ಲೀಗ್ ನೇತಾರರಾದ 10 ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ಕ್ರಿಯಾ ಸಮಿತಿ ನೇತಾರನೂ,  ಸಿಪಿಎಂ  ಕುಂಬಳೆ ಏರಿಯಾ ಸೆಕ್ರೆಟರಿಯಾದ ಸಿ.ಎ. ಸುಬೈರ್, ಲೀಗ್ ಪದಾಧಿಕಾರಿಗಳಾದ ಎ.ಕೆ.ಆರೀಫ್, ಅಶ್ರಫ್ ಕಾರ್ಳೆ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ 7 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಟೋಲ್ ಬೂತ್ ಮೆನೇಜರ್ ಹರ್ಯಾಣ ನಿವಾಸಿಯಾದ ಅಮಿತ್ ಕುಮಾರ್ …

ಸ್ವರ್ಗ ತೂಂಬಡ್ಕದಲ್ಲಿ ಚಿರತೆಯ ಹೆಜ್ಜೆ ಹೋಲುವ ಗುರುತು ಪತ್ತೆ

ಪೆರ್ಲ: ಪಾಣಾಜೆ ಸ್ವರ್ಗ ಸಮೀಪದ ತೂಂಬಡ್ಕದಲ್ಲಿ ನಿನ್ನೆ ಸಂಜೆ ಚಿರತೆ ಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. ಕೇರಳ- ಕರ್ನಾಟಕ ಗಡಿ ಪ್ರದೇಶವಾದ ತೂಂಬಡ್ಕ ಬಯಲಿನ ಕಲ್ಲುಕೋರೆ ಸಮೀಪ ಚಿರತೆ ಕಂಡು ಬಂದಿದೆ ಎಂದು ಮುಳಿಹುಲ್ಲು ಎರೆಯುತ್ತಿದ್ದ ಮಹಿಳೆಯೊಬ್ಬರು ತಿಳಿಸಿದ್ದಾರೆ.  ಭಯಗೊಂಡ ಇವರು ಸಮೀಪದ ಮನೆಯವರಲ್ಲಿ ತಿಳಿಸಿದ್ದು, ಬಳಿಕ ಸ್ಥಳೀಯರು ನಡೆಸಿದ ಹುಡುಕಾಟದಲ್ಲಿ ಚಿರತೆಯದ್ದೆಂದು ಶಂಕಿಸುವ ಹೆಜ್ಜೆಗುರುತು ಪತ್ತೆಹಚ್ಚಲಾಗಿದೆ. ಮಹಿಳೆ ನೀಡಿದ ಹೇಳಿಕೆಯಂತೆ ಪಾಣಾಜೆ ಅಧಮೂಲೆ ಅಥವಾ ಸ್ವರ್ಗ ಬೈರಡ್ಕ ಭಾಗಕ್ಕೆ ಚಿರತೆ ತೆರಳಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲವು ದಿನಗಳ …

ಹೊಸಂಗಡಿಯಲ್ಲಿ ಕಬಡ್ಡಿ ಪಂದ್ಯಾಟ ನಾಳೆ

ಹೊಸಂಗಡಿ: ಬಂಗ್ರಮಂಜೇಶ್ವರ ಶ್ರೀ ಅಯ್ಯಪ್ಪಕೃಪ ವೀರಮಾರುತಿ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಅಖಿಲ ಭಾರತ ಮಟ್ಟದ ಎ ಗ್ರೇಡ್ ಕಬಡ್ಡಿ ಪಂದ್ಯಾಟ ನಾಳೆ ಹೊಸಂಗಡಿಯಲ್ಲಿ ಜರಗಲಿದೆ. ಕಾಸರಗೋಡು ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಸಹಕಾರದೊಂದಿಗೆ ನಡೆಯುವ ಪಂದ್ಯಾಟದಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ 5೦,೦೦೦ ರೂ. ಮತ್ತು ಟ್ರೋಫಿ, ದ್ವಿತೀಯ 3೦,೦೦೦ ರೂ., ಟ್ರೋಫಿ, ತೃತೀಯ ಹಾಗೂ ಚತುರ್ಥ 1೦,೦೦೦ ರೂ. ಮತ್ತು ಟ್ರೋಫಿ ನೀಡಲಾಗುವುದು. ಅಲ್ಲದೆ ಉತ್ತಮ ರಕ್ಷಣೆಗಾರ, ಉತ್ತಮ ಸವ್ಯಸಾಚಿ, ಉತ್ತಮ ಹಿಡಿತಗಾರ ಬಹುಮಾನ ನೀಡಲಾಗುವುದು. ನಾಳೆ ಸಂಜೆ …